ಸಂಸ್ಕಾರ,ಧರ್ಮ,ಆಚಾರ ವಿಚಾರ ಎಂದರೇನು ?
Index of Important Points
‘ಸಂಸ್ಕಾರ’ ಎಂದರೇನು ?
ಸಂಸ್ಕಾರ – ಸಮ್ ಜ್ ಸಮ್ಯಕ್ ಜ್ (ಒಳ್ಳೆಯ) + ಕಾರ ಜ್ (ಕಾರ್ಯ, ಕೃತಿ)
ಪ್ರತಿಯೊಂದು ಕಾರ್ಯವೂ ಸಂಸ್ಕಾರಯುತವಾಗಿರಬೇಕು, ಉದಾಹರಣೆಗೆ : ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಬಿಸಾಡುತ್ತೇವೆ, ಇದೊಂದು ಕೃತಿ ಆಯಿತು. ಬಾಳೆಹಣ್ಣು ತಿಂದು ಅದರ ಸಿಪ್ಪೆಯನ್ನು ಕಸದ ಬುಟ್ಟಿಯಲ್ಲಿ ಹಾಕುವುದು (ಒಳ್ಳೆಯ) ಪ್ರಕೃತಿ. ಆದರೆ ಆ ಸಿಪ್ಪೆಯನ್ನು ಹಾದಿಯಲ್ಲಿ ಬಿಸಾಡುವುದು ವಿಕೃತಿ ಆಗುತ್ತದೆ. ಅದೇ, ಬೇರೆಯವರು ಬಾಳೆ ಹಣ್ಣಿನ ಸಿಪ್ಪೆಯನ್ನು ರಸ್ತೆಯ ಮೇಲೆ ಬಿಸಾಡಿದ್ದಾರೆ ಅದನ್ನು ಕಸದ ಬುಟ್ಟಿಯಲ್ಲಿ ಹಾಕುವುದು ಸಂಸ್ಕೃತಿ ಎನಿಸಿಕೊಳ್ಳುತ್ತದೆ.
ಹೊಟ್ಟೆ ಹಸಿದಾಗ ತಿನ್ನುವುದು ಪ್ರಕೃತಿ. ಬೇರೆಯವರ ತಟ್ಟೆಯಿಂದ ಅನ್ನ ಕಸಿದು ತಿನ್ನುವುದು ವಿಕೃತಿ! ಆದರೆ ಅತಿಥಿಗಳ, ಮನೆಯ ಸದಸ್ಯರ (ಹಿರಿಯರು, ಕೆಲಸದವರು ಇವರೆಲ್ಲರ) ಊಟ ಆಗಿದೆಯೇ ಎಂದು ನೋಡಿ, ಮತ್ತೆ ಸ್ವತಃ ದೇವರಿಗೆ ನೈವೇದ್ಯ ಅರ್ಪಿಸಿ ಅನ್ನವನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುವುದೇ ಸಂಸ್ಕೃತಿ.
ಮನನ (ಆಳವಾದ ಚಿಂತನೆ) ಮಾಡಿ, ಸಮಗ್ರವಾಗಿ ವಿಚಾರ ಮಾಡಿ, ಕೃತಿ ಮಾಡುವವನೇ ಮಾನವ. ವಿಚಾರ ಮತ್ತು ಕೃತಿಯು ಒಳ್ಳೆಯದಾಗಿರಲು ಸಂಸ್ಕಾರವೂ ಒಳ್ಳೆಯದಾಗಿರಬೇಕು, ಪ್ರತಿಯೊಂದು ಕೃತಿ ಕೂಡ ಸಂಸ್ಕಾರಯುತವಾಗಿರಬೇಕು.
ಸಂಸ್ಕಾರವೆಂದರೆ ಗುಣಗಳ ‘ಗುಣಾಕಾರ’ ಮತ್ತು ದೋಷಗಳ ‘ಭಾಗಾಕಾರ’.
‘ಸಂಸ್ಕಾರ ಬೆಳೆಸುವುದು’ ಅಂದರೆ ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಮತ್ತು ಕೆಟ್ಟ ಅಭ್ಯಾಸಗಳನ್ನು ತೆಗೆದುಹಾಕುವುದು ಎಂದರ್ಥ.
ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ಬೆಳೆಸುವುದೆಂದರೆ ಅವರಿಗೆ ‘ತಾಯಿ-ತಂದೆಗೆ ನಮಸ್ಕಾರ ಮಾಡು’, ‘ಬೇರೆಯವರನ್ನು ನಿಂದಿಸಬೇಡ’ ಇತ್ಯಾದಿ ಒಳ್ಳೆಯ ಅಭ್ಯಾಸಗಳನ್ನು ಕಲಿಸುವುದು.
According to several schools of Hindu philosophy, including the “Yoga school”, samskara means characteristics, nature, or mental features that are predetermined from birth or are established to improve an individual during there lifetime which remains as as footprints on the human psyche. A person’s personality, responses, and mental states are affected by these ideal or predefined mudras of karma within them.
“ಯೋಗ ಶಾಲೆ” ಸೇರಿದಂತೆ ಹಿಂದೂ ತತ್ತ್ವಶಾಸ್ತ್ರದ ಹಲವಾರು ಶಾಲೆಗಳ ಪ್ರಕಾರ, ಸಂಸ್ಕಾರ ಎಂದರೆ ಹುಟ್ಟಿನಿಂದಲೇ ಪೂರ್ವನಿರ್ಧರಿತವಾದ ಅಥವಾ ಮಾನವನ ಮನಸ್ಸಿನ ಮೇಲೆ ಹೆಜ್ಜೆಗುರುತುಗಳಾಗಿ ಉಳಿದಿರುವ ವ್ಯಕ್ತಿಯ ಜೀವಿತಾವಧಿಯಲ್ಲಿ ಸುಧಾರಿಸಲು ಸ್ಥಾಪಿಸಲಾದ ಗುಣಲಕ್ಷಣಗಳು, ಸ್ವಭಾವ ಅಥವಾ ಮಾನಸಿಕ ಲಕ್ಷಣಗಳು. ವ್ಯಕ್ತಿಯ ವ್ಯಕ್ತಿತ್ವ, ಪ್ರತಿಕ್ರಿಯೆಗಳು ಮತ್ತು ಮಾನಸಿಕ ಸ್ಥಿತಿಗಳು ಅವರೊಳಗಿನ ಈ ಆದರ್ಶ ಅಥವಾ ಪೂರ್ವನಿರ್ಧರಿತ ಕರ್ಮದ ಮುದ್ರೆಗಳಿಂದ ಪ್ರಭಾವಿತವಾಗಿರುತ್ತದೆ.
ಇದನ್ನು ಹೇಗೆ ಮಾಡಬೇಕು?
ತತ್ವಜ್ಞಾನದಿಂದ ಅವರ ಮನಸ್ಸಿನ ಸ್ಥರದಲ್ಲಿ ಹೇಳಿ ಅಲ್ಲ ಅಥವಾ ಕಥೆಗಳ ಮುಖಾಂತರ ಅಲ್ಲ ಅಥವಾ ಅವರಿಗೆ ಚಾಕಲೇಟ್ ಐಸ್ ಕ್ರೀಂನ ಲಂಚ ಕೊಟ್ಟೂ ಅಲ್ಲ!
ನಮ್ಮ ಕೃತಿಗಳ ಮುಖಾಂತರ ಅವರಿಗೆ ಕಲಿಸಬೇಕು!
೮ ವರ್ಷದ ಮಕ್ಕಳಿಗೆ ದೊಡ್ಡವರಿಗೆ ನಮಸ್ಕಾರ ಮಾಡುವಂತೆ ಆಜ್ಞೆಯನ್ನು ಮಾಡಿದರೆ ೪ ದಿನ ಮಾಡಬಹುದು, ೫ನೇ ದಿನ ‘ನಾನು ಮಾಡುವುದಿಲ್ಲ’ ಎಂದು ಹೇಳುತ್ತಾರೆ!
ಅವರಿಗೆ ನಮಸ್ಕಾರ ಮಾಡುವ ಲಾಭದ ತತ್ವವನ್ನು ಹೇಳಿದರೂ ಫಲ ಸಿಗದು.
ನಿಮ್ಮ ಮಕ್ಕಳು ಹಿರಿಯರಿಗೆ ನಮಸ್ಕಾರ ಮಾಡಬೇಕು ಎಂದು ನಿಮಗೆ ಅನಿಸುತ್ತಿದ್ದಲ್ಲಿ ಅದಕ್ಕೆ ಒಂದೇ ಉಪಾಯವಿದೆ,
ಇವತ್ತನಿಂದಲೇ ನೀವೂ ಕೂಡ ಹಿರಿಯರಿಗೆ ನಮಸ್ಕಾರ ಮಾಡಲು ಪ್ರಾರಂಭಿಸಿ.
ಮಕ್ಕಳಿಗೆ ನಮಸ್ಕಾರ ಮಾಡಲು ಹೇಳಬೇಡಿ.
೪ ದಿನಗಳಲ್ಲಿ ನಿಮ್ಮ ಮಕ್ಕಳು ನಿಮ್ಮ ಹಿಂದೆ ಬಂದು ಮನೆಯ ಹಿರಿಯರಿಗೆ ನಮಸ್ಕಾರ ಮಾಡಲು ಪ್ರಾರಂಭಿಸುವರು.
‘ನನ್ನ ತಾಯಿ ತಂದೆ ಅಜ್ಜ-ಆಜ್ಜಿಗೆ ನಮಸ್ಕಾರ ಮಾಡುತ್ತಾರೆ, ನಾನು ಮಾತ್ರ ನಿರ್ಲಜ್ಜನಾಗಿ ಹಿಂದೆ ನಿಂತಿರುತ್ತೇನೆ’ ಎಂದು ಅವರಿಗೆ ನಾಚಿಕೆ ಆಗಿ ತಾವೇ ಮುಂದೆ ಬಂದು ನಮಸ್ಕರಿಸುತ್ತಾರೆ.
ಸಂಸ್ಕಾರ ನಿರ್ಮಿಸುವುದಕ್ಕೆ ಒಂದೇ ಉಪಾಯ ‘ಮಾತು ನಿಲ್ಲಿಸಿ, ಕೃತಿಯಲ್ಲಿ ತೋರಿಸಿ!’
“ಸಂಸ್ಕಾರದ ಫಲ”
- ಸಾಧಾರಣ ಶಿಲೆಯು ಜನ ಓಡಾಡುವ ಜಾಗದಲ್ಲಿದ್ದು, ಅವರ ಪಾದಗಳ ತುಳಿತಕ್ಕೆ ಸಿಲುಕುವುದು..
- ಶಿಲ್ಪಿಯಿಂದ ಪೆಟ್ಟು ತಿಂದು, ತಾಳ್ಮೆಯಿಂದ ಸಹಿಸಿದ ಶಿಲೆಯು, ಸಂಸ್ಕಾರ ಪಡೆದು ಮೂರ್ತಿಯಾಗುತ್ತದೆ…
- ಗರ್ಭಗುಡಿಯ ಮೂರ್ತಿಯಾಗಿ ಪೂಜನೀಯವಾಗುತ್ತದೆ.. ಜನರು ಅದನ್ನು ಪೂಜಿಸುತ್ತಾರೆ…
ಹಾಗೆಯೇ..
- ಸಂಸ್ಕಾರ ಪಡೆದ ನೀರು ತೀರ್ಥ ವಾಗುತ್ತದೆ… ಜನರು ಅದನ್ನು ಪವಿತ್ರಭಾವದಿಂದ ಕುಡಿಯುತ್ತಾರೆ…
- ಸಂಸ್ಕಾರ ಪಡೆದ ಆಹಾರವನ್ನು ಪ್ರಸಾದ ವೆಂದು ಸ್ವೀಕರಿಸುತ್ತಾರೆ…
- ಸಂಸ್ಕಾರ ಪಡೆದ ಮನುಷ್ಯನು ದೇವಮಾನವನಾಗುತ್ತಾನೆ…
- ಆದ್ದರಿಂದ ಸಂಸ್ಕಾರಯುತ ಜೀವನವನ್ನು ಸಾಗಿಸಬೇಕು. ಸಾಧಾರಣವಾಗಿದ್ದ ಪ್ರತಿಯೊಂದೂ ಸಂಸ್ಕಾರದಿಂದ ಶ್ರೇಷ್ಠವಾಗುವುದು..
ಷೋಡಶ ಸಂಸ್ಕಾರಗಳು ಎಂದರೇನು?
ಒಟ್ಟು ಸಂಸ್ಕಾರಗಳ ಸಂಖ್ಯೆ 40. ಕಾಲಾನಂತರದಲ್ಲಿ, ವೈದಿಕ ಆದೇಶದಿಂದ ವ್ಯಕ್ತಿಯ ಜೀವನಶೈಲಿಯು ಬದಲಾಗಲಾರಂಭಿಸಿದಾಗ, ಈ ಎಲ್ಲಾ 40 ಸಂಸ್ಕಾರಗಳ ಮೇಲಿನ ಪ್ರಚೋದನೆಯು ಕಡಿಮೆಯಾಯಿತು, ಕೇವಲ ಹದಿನಾರು ಸಂಸ್ಕಾರಗಳು ವೈಯಕ್ತಿಕ ಜೀವನದ ಹಂತಗಳೊಂದಿಗೆ ಸಂಬಂಧ ಹೊಂದಿದ್ದು ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಈ ಹದಿನಾರು ವಿಧಿಗಳನ್ನು ‘ಷೋಡಶ ಸಂಸ್ಕಾರಗಳು’ ಎಂದು ಕರೆಯಲಾಗುತ್ತದೆ.
What is Shodasha Samskara?
The total number of samskaras is 40. Over time, as the lifestyle of a person began to change from the Vedic order, the emphasis on all these 40 samskaras decreased, only sixteen samskaras associated with individual life stages gained importance. These sixteen rites are known as ‘Shodasha Samskaras’.
List of Shodasa Samskaras
Note: Prasava, Panchamahayajna, Keshantha and Ritushuddhi, Vidyaramba, Vedaramba, Sanyasa Sanskaras may vary according to each author’s lists.
- 1. Garbhadhaana (conception)
- 2. Pumsavana
- 3. Seemanthonayana
- 4. Jatakarma
- 5. Namkarana
- 6. Nishkramana
- 7. Annaprashana
- 8. Chudakarma
- 9. Karnavedha
- 10. Keshaanta and Ritusuddhi
- 11. Upanayana
- 12. Vedarambha
- 13. Samavartana
- 14. Vivaha
- 15. Vaanprastha
- 16. Antyeshti
ಷೋಡಶ ಸಂಸ್ಕಾರಗಳ ಪಟ್ಟಿ
ಗಮನಿಸಿ: ಪ್ರಸವ, ಪಂಚಮಹಾಯಜ್ಞ, ಕೇಶಾಂತ ಮತ್ತು ಋತುಶುದ್ಧಿ, ವಿದ್ಯಾರಂಭ, ವೇದಾರಂಭ, ಸನ್ಯಾಸ ಸಂಸ್ಕಾರಗಳು ಪ್ರತಿ ಕರ್ತೃ ಪಟ್ಟಿಗಳ ಪ್ರಕಾರ ಬದಲಾಗಬಹುದು.
- 1. ಗರ್ಭಧಾನ (ಗರ್ಭಧಾರಣೆ)
- 2. ಪುಂಸವನ
- 3. ಸೀಮಂತೋನಯನ
- 4. ಜಾತಕರ್ಮ
- 5. ನಾಮಕರಣ
- 6. ನಿಷ್ಕ್ರಮಣ
- 7. ಅನ್ನಪ್ರಾಶನ
- 8. ಚೂಡಾಕರ್ಮ
- 9. ಕರ್ಣವೇದ
- 10. ಕೇಶಾಂತ ಮತ್ತು ಋತುಶುದ್ಧಿ
- 11. ಉಪನಯನ
- 12. ವೇದಾರಂಭ
- 13. ಸಮಾವರ್ತನ
- 14. ವಿವಾಹ
- 15. ವಾನಪ್ರಸ್ಥ
- 16. ಅಂತ್ಯೇಷ್ಟಿ
What are the rites performed for girls without mantra?
As mentioned in Garuda Purana these rites are performed without chanting mantras in case of girls.
- Garbhadhana Vidhi (conception) or Garbhalambhanam; Pumsavana rite before the baby throbbing in the womb;
- Simanta in the sixth or eighth month.
- Prasava (delivery of child)
- Jatakarma (Birth)
- On the eleventh day Namkarana (naming) rites.
- Niskrama (coming out of the house) in the fourth month.
- Annaprasana (feeding with solid food) in the sixth month.
- and Choodaakarana (ceremonial cutting of the forelock).
ಹೆಣ್ಣು ಮಕ್ಕಳಿಗೆ ಮಂತ್ರ ಹೇಳದೆ ಮಾಡುವ ಸಂಸ್ಕಾರಗಳೇನು?
ಗರುಡ ಪುರಾಣದಲ್ಲಿ ಉಲ್ಲೇಖಿಸಿದಂತೆ ಈ ವಿಧಿಗಳನ್ನು ಹೆಣ್ಣು ಮಕ್ಕಳಿಗೆ ಮಂತ್ರಗಳನ್ನು ಪಠಿಸದೆ ಮಾಡಲಾಗುತ್ತದೆ.
- ಗರ್ಭಾಧಾನ ವಿಧಿ ಅಥವಾ ಗರ್ಭಾಲಾಂಭನಂ.
- ಹೊಟ್ಟೆಯಲ್ಲಿ ಮಗು ಮಿಡಿಯುವ ಮುನ್ನ ಪುಂಸವನ ಸಂಸ್ಕಾರ.
- ಆರನೇ ಅಥವಾ ಎಂಟನೇ ತಿಂಗಳಲ್ಲಿ ಸಿಮಂತ.
- ಪ್ರಸವ (ಮಗುವಿನ ಹೆರಿಗೆ)
- ಜಾತಕರ್ಮ (ಜನನ)
- ಹನ್ನೊಂದನೇ ದಿನ ನಾಮಕರಣ ವಿಧಿಗಳು.
- ನಾಲ್ಕನೇ ತಿಂಗಳಲ್ಲಿ ನಿಷ್ಕ್ರಮ (ಮನೆಯಿಂದ ಹೊರಗೆ ಬರುವುದು).
- ಆರನೇ ತಿಂಗಳಲ್ಲಿ ಅನ್ನಪ್ರಾಸನ (ಘನ ಆಹಾರದೊಂದಿಗೆ).
- ಮತ್ತು ಚೂಡಾಕರಣ (ತಲೆ ಕೂದಲು ಕತ್ತರಿಸುವುದು)
ಧರ್ಮ ಎಂದರೇನು?
ಮನುಷ್ಯನಾಗಿ ಹುಟ್ಟಿದವನು ಅದನ್ನು ಹೇಗೆ ಆಚರಿಸಬೇಕು ಎಂಬ ಸವಿಸ್ತಾರವಾದ ವಿವರಣೆ ಇದೆ. ಇದರಲ್ಲಿ ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗಗಳ ಯುಗಧರ್ಮಗಳೇನು, ಅವುಗಳ ಅತಿಶಯಗಳು ಏನು ಎಂಬ ಬಗ್ಗೆಯೂ, ಈ ಯುಗಗಳ ಮಹತ್ವದ ಬಗ್ಗೆಯೂ ಉಲ್ಲೇಖವಿದೆ.
ಯಾಗ, ಯಜ್ಞ ಆಚರಿಸಲು ಯಾರು ಅರ್ಹರು, ಹೇಗೆ ಆಚರಿಸಬೇಕು ಎಂಬ ಬಗ್ಗೆ ಉಲ್ಲೇಖವಿದೆ. ಮನುಷ್ಯ ಮಾತ್ರನಾದವನು ತ್ರಿಗುಣಗಳಲ್ಲಿ ಶ್ರೇಷ್ಠವಾದ ಸಾತ್ವಿಕ ಮಾರ್ಗದಲ್ಲಿ ಜೀವಿಸಿ, ಸನ್ಮಾರ್ಗ, ಧರ್ಮ ಮಾರ್ಗಗಳಲ್ಲಿ ಸಾಗಿ ಅಧ್ಯಾತ್ಮಿಕ ಉನ್ನತಿ ಪಡೆದು ಭಗವಂತನ ಸಾಕ್ಷಾತ್ಕಾರವನ್ನು ಹೇಗೆ ಸಾಧಿಸಬೇಕು ಎಂಬುದರ ಬಗ್ಗೆ ಸುದೀರ್ಘ ವಿವರಣೆ .
ಅತಿಥಿಗಳನ್ನು ಮನೆಗೆ ಹೇಗೆ ಬರಮಾಡಿಕೊಳ್ಳಬೇಕು? ಮತ್ತು ಹೇಗೆ ಬೀಳ್ಕೊಡಬೇಕು
ಮನೆಗೆ ಬಂದ ಅತಿಥಿ ಮತ್ತು ಬಂಧು ಮಿತ್ರರನ್ನು ಹೇಗೆ ಬರಮಾಡಿಕೊಳ್ಳಬೇಕು?
ಅನೇಕ ಬಾರಿ ನಿಮ್ಮ ಮನೆಗೆ ನಿಮ್ಮ ತಂದೆ ತಾಯಿಯ ಪರಿಚಯಸ್ಥರು ಅವರನ್ನು ಭೇಟಿ ಮಾಡಲು ಬರುತ್ತಾರೆ ಅಲ್ಲವೇ?
ಹಲವಾರು ಮನೆಗಳಲ್ಲಿ, ಅತಿಥಿಗಳು ಬಂದರೂ ಕೂಡ ಮಕ್ಕಳು ದೂರದರ್ಶನದ ಕಾರ್ಯಕ್ರಮಗಳನ್ನು ವೀಕ್ಷಿಸುವುದರಲ್ಲಿ ಮಗ್ನವಾಗಿರುತ್ತಾರೆ. ಕುಳಿತ ಜಾಗದಿಂದ ಎದ್ದು, ಬಂದವರನ್ನು ಬರಮಾಡಿಕೊಳ್ಳುವುದಿಲ್ಲ.
ಸೋಫಾ ಅಥವಾ ಬೇರೆ ಆಸನಗಳ ಮೇಲೆ ಜಾಗ ಇಲ್ಲಿದಿದ್ದರೆ ಅತಿಥಿಗಳು ನಿಂತಲ್ಲೇ ಇರಬೇಕಾಗುತ್ತದೆ, ಮಕ್ಕಳು ತಾವಾಗಿಯೇ ಎದ್ದು ಅತಿಥಿಗಳಿಗೆ ಸ್ಥಳ ಮಾಡಿಕೊಡುವುದಿಲ್ಲ.
ದೂರದರ್ಶನದ ಕಾರ್ಯಕ್ರಮದ ಶಬ್ಧದಲ್ಲಿ ಅತಿಥಿಗಳು ಏನು ಮಾತನಾಡುತ್ತಿದ್ದಾರೆ ಎಂದು ಕೇಳಿಸಿಕೊಳ್ಳಲೂ ಕೂಡ ಕಷ್ಟವಾಗುತ್ತದೆ.
ಬೇರೆ ಉಪಾಯವಿಲ್ಲದೆ ಪಾಲಕರು ದೂರದರ್ಶನದ ಧ್ವನಿಯನ್ನು ಕಮ್ಮಿ ಮಾಡಲು ಅಥವಾ ದೂರದರ್ಶನವನ್ನು ಮುಚ್ಚಿ ಒಳಗೆ ಹೋಗಲು ಮಕ್ಕಳಿಗೆ ಹೇಳಬೇಕಾಗುತ್ತದೆ.
ಅದರೂ ಕೆಲವು ಮಕ್ಕಳು ಉದ್ಧಟತನದಿಂದ ಉತ್ತರಿಸುವುದು ನೋಡಿರಬಹುದು.
ಮನೆಗೆ ಬಂದ ಅತಿಥಿಗಳ ವಿಷಯದಲ್ಲಿ ಯಾವ ಭಾವವನ್ನು ಇಟ್ಟುಕೊಳ್ಳಬೇಕು?
ಸಂಸ್ಕೃತದಲ್ಲಿ ‘ಅತಿಥಿ ದೇವೋ ಭವ |’ ಎಂಬ ಪ್ರಸಿದ್ಧ ಉಕ್ತಿಯೊಂದಿದೆ. ‘ಅತಿಥಿಗಳು ದೇವರ ರೂಪವಾಗಿದ್ದಾರೆ’ ಎಂಬುದು ಇದರ ಅರ್ಥ.
‘ದೇವರೇ ಸ್ವತಃ ಅತಿಥಿಗಳ ರೂಪದಲ್ಲಿ ನಮ್ಮ ಮನೆಗೆ ಬಂದಿರುತ್ತಾರೆ’ ಎಂಬುದನ್ನು ಹಿಂದೂ ಧರ್ಮದಲ್ಲಿ ಕಲಿಸಲಾಗುತ್ತದೆ.
ಧರ್ಮದಲ್ಲಿ ತಿಳಿಸಿದ ಪ್ರಕಾರ, ನಾವು ನಮ್ಮ ಮನೆಗೆ ಬಂದ ಅತಿಥಿಗಳನ್ನು ಆದರದಿಂದ ಬರಮಾಡಿಕೊಂಡು ಸತ್ಕರಿಸಬೇಕು. ಅವರ ಆದರಾತಿಥ್ಯವನ್ನು ಆದಷ್ಟು ಉತ್ತಮ ರೀತಿಯಲ್ಲಿ ಮಾಡಬೇಕು.
ಮನೆಗೆ ಬಂದ ಅತಿಥಿಗಳು ಮತ್ತು ನೆಂಟರ ಸ್ವಾಗತ ಮತ್ತು ಆದರಾತಿಥ್ಯವನ್ನು ಹೇಗೆ ಮಾಡಬೇಕು?
- ೧. ಅತಿಥಿಗಳು ಮನಗೆ ಬಂದಾಗ ಕೂಡಲೇ ಎದ್ದು ನಮಸ್ಕರಿಸಿ ಅವರನ್ನು ಬರಮಾಡಿಕೊಳ್ಳಬೇಕು.
- ೨. ಅತಿಥಿಗಳು ನಿಂತೇ ಇದ್ದರೆ ಅವರ ಮುಂದೆ ಕುಳಿತುಕೊಳ್ಳಬಾರದು.
- ೩. ಅವರಿಗೆ ಕುಳಿತುಕೊಳ್ಳಲು ಆಸನಗಳನ್ನು ಅಥವಾ ಸ್ಥಳವನ್ನು ಮಾಡಿಕೊಳ್ಳಬೇಕು.
- ೪. ಅತಿಥಿಗಳು ಕುಳಿತುಕೊಂಡ ಮೇಲೆಯೇ ನಾವು ಕುಳಿತುಕೊಳ್ಳಬೇಕು. ಇದರಿಂದ ನಮ್ಮಲ್ಲಿ ವಿನಮ್ರತೆಯ ವೃದ್ಧಿಯಾಗುವುದಲ್ಲದೇ ಅತಿಥಿಗಳ ಬಗ್ಗೆ ಆದರವೂ ವ್ಯಕ್ತಪಡಿಸಿದಂತೆ ಆಗುತ್ತದೆ.
- ೫. ಅತಿಥಿಗಳು ದಣಿದು ಬಂದಿರುವುದರಿಂದ ಅವರಿಗೆ ಕೂಡಲೇ ಕುಡಿಯಲು ನೀರು ತಂದುಕೊಡಬೇಕು.
- ೬. ಅವರೊಂದಿಗೆ ಮಾತನಾಡುವಾಗ ಹಸನ್ಮುಖರಾಗಿ ಮತ್ತು ಪ್ರೀತಿಯಿಂದ ಮಾತನಾಡಬೇಕು.
- ೭. ಅತಿಥಿಗಳಿಗೋಸ್ಕರ ಚಹಾ, ತಂಪು ಪಾನೀಯ ಅಥವಾ ತಿಂಡಿ ತಿನಿಸುಗಳನ್ನು ತರಲು ತಂದೆ ಅಥವಾ ತಾಯಿ ತಿಳಿಸಿದ ಕೂಡಲೇ ತಂದುಕೊಡಬೇಕು.
- ೮. ಹಿರಿಯರು ಯಾವುದೇ ವಿಷಯದ ಬಗ್ಗೆ ಮಾತನಾಡುತ್ತಿರುವಾಗ ನಾವು ಮಧ್ಯದಲ್ಲಿ ಬೇರೆ ವಿಷಯದ ಬಗ್ಗೆ ಮಾತನಾಡಬಾರದು.
- ೯. ಅತಿಥಿಗಳು ನಿಮ್ಮ ಮನೆಯಿಂದ ಹೊರಡಲು ಸಿದ್ಧರಾಗುತ್ತಿದರೆ, ನೀವೂ ಕೂಡ ತಕ್ಷಣ ಎದ್ದು ನಿಲ್ಲಬೇಕು.
- ೧೦. ಅತಿಥಿಗಳನ್ನು ಮನೆಯಿಂದ ಬೀಳ್ಕೊಡುವಾಗ ಅವರೊಂದಿಗೆ ನಾಲ್ಕು ಹೆಜ್ಜೆ ಹೋಗಿ ಮತ್ತೆ ಅವರಿಗೆ ಬೀಳ್ಕೊಡಬೇಕು.
ಇದೇ ರೀತಿ ಅತಿಥಿಗಳಲ್ಲಿ ದೇವರ ರೂಪವನ್ನು ನೋಡಿ ಅವರ ಆದರಾತಿಥ್ಯವನ್ನು ಮಾಡಬೇಕು. ಅತಿಥಿಗಳ ಆದರಾತಿಥ್ಯದಲ್ಲಿ ‘ನಾವು ಮಾಡುವುದೆಲ್ಲ ದೇವರಿಗೆ ತಲುಪುತ್ತಿದೆ’ ಎಂಬ ಭಾವವನ್ನು ಇಟ್ಟುಕೊಳ್ಳಬೇಕು. ಇದರಿಂದ ಅವರಲ್ಲಿರುವ ದೇವತ್ವದ ಲಾಭವು ನಮಗಾಗುತ್ತದೆ.
ಹಿಂದೂ ಧರ್ಮದಲ್ಲಿ ತಿಳಿಸಿರುವಂತೆ ‘ಅತಿಥಿ ದೇವೋ ಭವ |’ ಎಂಬ ಮಾರ್ಗದಲ್ಲಿ ಕ್ರಮಿಸಿ, ಆನಂದವನ್ನು ನಿಮ್ಮದಾಗಿಸಿ!
ಜೀವನದ ನಾಲ್ಕು ಅಮೂಲ್ಯ ರತ್ನಗಳು
ಜೀವನದಲ್ಲಿ ಈ ಅಮೂಲ್ಯ ೪ ರತ್ನಗಳನ್ನು ಅಳವಡಿಸಿಕೊಂಡವರು ಸಂಸ್ಕಾರವಂತರು.
ನಾಲ್ಕು ಅಮೂಲ್ಯ ರತ್ನಗಳನ್ನು ನಿಮಗಾಗಿ ಕಳುಹಿಸುವೆ
ಇವುಗಳಿಂದ ನೀವು ಖಂಡಿತವಾಗಿಯೂ ಧನಿಕರಾಗುವಿರೆಂಬ ನಂಬಿಕೆ ನನಗಿದೆ.
ಮೊದಲ ರತ್ನ : ಕ್ಷಮೆ
ನಿಮಗೆ ಯಾರೇ ಏನೇ ಹೇಳಲಿ, ಅವರ ಮಾತನ್ನು ಎಂದಿಗೂ ಮನಸ್ಸಿಗೆ ತೆಗೆದುಕೊಳ್ಳಬಾರದು ಮತ್ತು ಅದಕ್ಕಾಗಿ ಎಂದಿಗೂ ಅವರ ಮೇಲೆ ಸೇಡಿನ ಭಾವನೆ ಇಟ್ಟುಕೊಳ್ಳಬಾರದು. ಅವರನ್ನು ಕ್ಷಮಿಸಿಬಿಡಬೇಕು.
ಎರಡನೇ ರತ್ನ :ಜಾಣ ಮರೆವು
ನಾವು ಇನ್ನೊಬ್ಬರಿಗೆ ಮಾಡಿದ ಉಪಕಾರವನ್ನು ಮರೆತುಬಿಡಬೇಕು. ಎಂದಿಗೂ ಆ ಉಪಕಾರಕ್ಕೆ ಪ್ರತಿಫಲವನ್ನು ಅಪೇಕ್ಷಿಸದೇ ಇರುವುದು.
ಮೂರನೇ ರತ್ನ : ವಿಶ್ವಾಸ
ಸದಾ ನಮ್ಮ ಪ್ರಯತ್ನ ಮತ್ತು ಆ ಪರಮಪುರುಷ ಪರಮಾತ್ಮನಲ್ಲಿ ಅಚಲವಿಶ್ವಾಸವನ್ನಿಡುವುದು. ಇದೇ ಸಫಲತೆಯ ಸೂತ್ರ .
ನಾಲ್ಕನೇ ರತ್ನ : ವೈರಾಗ್ಯ
ಜಾತಸ್ಯ ಮರಣಂ ಧ್ರುವಂ – ಹುಟ್ಟಿದ ಪ್ರತಿಯೊಬ್ಬನೂ ಸಾಯಲೇ ಬೇಕು ಎನ್ನುವ ಮಾತನ್ನು ಯಾವಾಗಲೂ ನೆನಪಿಡಬೇಕು. ಅದರಂತೆಯೇ ಸಮಯ ವ್ಯರ್ಥ ಮಾಡದೇ ಜೀವನದ ಆನಂದದ ಅನುಭೂತಿಯನ್ನು ಪಡೆಯುತ್ತಾ ವರ್ತಮಾನದಲ್ಲಿ ಬದುಕುವುದು.
ಇದೇ ಜೀವನದ ನಿಜವಾದ ಸಾರ್ಥಕ್ಯ..
🌷 ಉಪವಾಸ ಮಾಡುವುದರ ಪ್ರಯೋಜನವೇನು..? 🌷
🌻 ಉಪವಾಸ ವ್ರತ ಮಾಡುವುದರಿಂದ ನಾನಾ ರೀತಿಯ ಪ್ರಯೋಜನಗಳಿವೆ. ವಾರದ ಏಳು ದಿನಗಳಲ್ಲಿ ಯಾವ ದಿನ ಉಪವಾಸ ಮಾಡಬೇಕು ಗೊತ್ತೇ..? ಯಾವ ದಿನ ಉಪವಾಸ ಮಾಡಿದರೆ ಏನು ಪ್ರಯೋಜನ..?
🌷ಸೋಮವಾರದ ಉಪವಾಸ
🌻ಕೋಪಿಷ್ಟರು, ಬಲಶಾಲಿ ಅಥವಾ ಉಗ್ರ ಸ್ವಭಾವದವರು ಎಂದು ಪರಿಗಣಿಸಲ್ಪಟ್ಟ ಜನರಿಗೆ ಸೋಮವಾರ ಉಪವಾಸವು ತುಂಬಾ ಪ್ರಯೋಜನಕಾರಿಯಾಗಿದೆ. ಸೋಮವಾರ ಶಿವನಿಗೆ ಸಮರ್ಪಿಸಲಾಗಿದೆ ಮತ್ತು ಇದರೊಂದಿಗೆ ಈ ದಿನವನ್ನು ಚಂದ್ರನಿಗೆ ಸಮರ್ಪಿಸಲಾಗಿದೆ. ಜಾತಕದಲ್ಲಿ ಚಂದ್ರನ ದೋಷ ಇರುವ ಜನರು ಈ ದಿನ ಉಪವಾಸವನ್ನು ಆಚರಿಸಬೇಕು. ಈ ದಿನ ಉಪವಾಸವನ್ನು ಕೈಗೊಂಡರೆ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ.
🌷ಮಂಗಳವಾರದ ಉಪವಾಸ
ಮಂಗಳವಾರ ಉಪವಾಸ ಮಾಡುವುದರಿಂದ ಸ್ವಭಾವದಲ್ಲಿ ಸಂಯಮವು ಹೆಚ್ಚಾಗುತ್ತದೆ. ಈ ದಿನವನ್ನು ಆಂಜನೇಯನಿಗೆ ಸಮರ್ಪಿಸಲಾಗಿದೆ ಮತ್ತು ಇದರ ಹೊರತಾಗಿ, ಯಾರ ಜಾತಕದಲ್ಲಿ ಮಂಗಳನ ಸ್ಥಿತಿ ಸರಿಯಾಗಿಲ್ಲ ಅವರಿಗೆ ಈ ಉಪವಾಸವು ತುಂಬಾ ಪ್ರಯೋಜನಕಾರಿಯಾಗಿದೆ. ಮಂಗಳವಾರ ಉಪವಾಸ ಕೈಗೊಳ್ಳುವವರು ಉಪ್ಪನ್ನು ಸೇವಿಸಬಾರದು. ಆರ್ಥಿಕ ಸಮಸ್ಯೆ ಪರಿಹರಿಸಲು ಈ ಉಪವಾಸ ಅತ್ಯಂತ ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ.
🌷ಬುಧವಾರ ಉಪವಾಸ
🌻 ಬುಧವಾರ ಬುಧ ಗ್ರಹದ ವಾರ. ಈ ವಾರವನ್ನು ಗಣೇಶನಿಗೆ ಸಮರ್ಪಿಸಲಾಗಿದೆ. ಕೆಲವರು ಈ ದಿನದಂದು ಉಪವಾಸವನ್ನು ಆಚರಿಸುತ್ತಾರೆ ಮತ್ತು ಗಣೇಶನನ್ನು ಪೂಜಿಸುತ್ತಾರೆ. ಈ ಉಪವಾಸವನ್ನು ಆಚರಿಸುವ ಮೂಲಕ, ನಾವು ಗಣೇಶನ ಆಶೀರ್ವಾದ ಮತ್ತು ಬುಧ ಗ್ರಹದ ಶುಭ ಪರಿಣಾಮಗಳನ್ನು ಪಡೆಯುತ್ತೇವೆ. ಬುಧವಾರ ಉಪವಾಸ ಆಚರಿಸುವ ಜನರು ಹಸಿರು ವಸ್ತುಗಳನ್ನು ದಾನ ಮಾಡಬೇಕು. ವಿವಾಹಿತ ಮಹಿಳೆಯರಿಗೆ ಬುಧವಾರ ಹಸಿರು ಬಳೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ, ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಿಸಿಕೊಳ್ಳಬಹುದು
🌷ಗುರುವಾರದ ಉಪವಾಸ
🌻ಈ ಉಪವಾಸವನ್ನು ವಿಶೇಷವಾಗಿ ಮಹಿಳೆಯರು ಆಚರಿಸುತ್ತಾರೆ. ಈ ಉಪವಾಸದ ಸಮಯದಲ್ಲಿ ಹಳದಿ ಬಟ್ಟೆಗಳನ್ನು ಧರಿಸುವುದು ಮತ್ತು ಹಳದಿ ವಸ್ತುಗಳನ್ನು ಸೇವಿಸುವುದು ಮತ್ತು ಹಳದಿ ವಸ್ತುಗಳನ್ನು ದಾನ ಮಾಡುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಈ ಉಪವಾಸವು ಭಗವಾನ್ ವಿಷ್ಣುವಿನ ಅನುಗ್ರಹ ಪಡೆಯಲು ನೆರವಾಗುತ್ತದೆ. ಜಾತಕದಲ್ಲಿ ಗುರು ಕೂಡ ಬಲಶಾಲಿಯಾಗುತ್ತಾರೆ. ಗುರು ಬಲಶಾಲಿಯಾದಾಗ ಮಾತ್ರ ನಮ್ಮ ಮನಸ್ಸು ವೇಗವಾಗಿ ಚಲಿಸುತ್ತದೆ ಮತ್ತು ಮನಸ್ಸಿನ ಚಡಪಡಿಕೆ ದೂರವಾಗುತ್ತದೆ. ಈ ಉಪವಾಸದಲ್ಲಿ ನೀವು ಉಪ್ಪನ್ನು ಬಳಸಬಾರದು.
🌷ಶುಕ್ರವಾರ ಉಪವಾಸ
🌻 ಶುಕ್ರವಾರ ತಾಯಿ ವೈಭವ ಲಕ್ಷ್ಮಿಯ ಆರಾಧನೆಯ ದಿನ ಎಂದು ಪರಿಗಣಿಸಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಈ ದಿನವು ಭೌತಿಕ ಸೌಕರ್ಯಗಳನ್ನು ಒದಗಿಸುವ ಗ್ರಹವಾದ ಶುಕ್ರನಿಗೆ ಸಮರ್ಪಿಸಲಾಗಿದೆ. ಈ ಉಪವಾಸವು ಇನ್ನೂ ತಂದೆಯಾಗದ ಪುರುಷರಿಗೆ ಪ್ರಯೋಜನಕಾರಿಯಾಗಿದೆ. ಈ ಉಪವಾಸವನ್ನು ಆಚರಿಸಿದರೆ ವೀರ್ಯವು ಬಲಗೊಳ್ಳುತ್ತದೆ ಎಂದು ನಂಬಲಾಗಿದೆ. ಇದರೊಂದಿಗೆ, ನಿದ್ರಾಹೀನತೆ ಮತ್ತು ಲ್ಯುಕೋರೊಹಿಯಾ ರೋಗಗಳನ್ನು ನಿರ್ಮೂಲನೆ ಮಾಡಲು ಇದು ಪ್ರಯೋಜನಕಾರಿಯಾಗಿದೆ.
🌷ಶನಿವಾರ ಉಪವಾಸ
🌻 ಲೌಕಿಕ ತೊಂದರೆಗಳಿಂದ ಬಳಲುತ್ತಿರುವ ಜನರು ಶನಿವಾರದ ಉಪವಾಸದಿಂದ ಪ್ರಯೋಜನ ಪಡೆಯುತ್ತಾರೆ. ಆಂಜನೇಯನು ಎಲ್ಲಾ ರೀತಿಯ ತೊಂದರೆಗಳಿಂದ ನಮ್ಮನ್ನು ರಕ್ಷಿಸುತ್ತಾನೆ. ಮತ್ತೊಂದೆಡೆ, ಈ ದಿನದ ಉಪವಾಸವು ಶನಿ ನಮ್ಮ ಮೇಲೆ ಕೆಟ್ಟ ಬೀರಿದರೆ ಅದರ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ನಮಗೆ ಉತ್ತಮ ಬುದ್ಧಿ ಸಿಗುತ್ತದೆ. ಈ ದಿನ ಉಪವಾಸದ ಜೊತೆಗೆ ನಾವು ಸುಂದರಕಾಂಡವನ್ನು ಕೂಡ ಪಠಿಸಬೇಕು. ಇದನ್ನು ಮಾಡುವುದರ ಮೂಲಕ, ಅಲ್ಲಿ ನಾವು ಬಯಸಿದ ಫಲಿತಾಂಶಗಳನ್ನು ಪಡೆಯುತ್ತೇವೆ, ನಂತರ ಶನಿಯ ಅಡ್ಡಪರಿಣಾಮಗಳು ಸಹ ಕಡಿಮೆಯಾಗುತ್ತವೆ.
🌷ಭಾನುವಾರದ ಉಪವಾಸ
🌻ಭಾನುವಾರದ ಪೂಜೆ ಸೂರ್ಯನಿಗೆ ಸಮರ್ಪಿಸಲಾಗುತ್ತದೆ. ಸೂರ್ಯದೇವನು ನಮ್ಮ ಗೌರವವನ್ನು ರಕ್ಷಿಸುತ್ತಾನೆ, ಅವನು ಆರೋಗ್ಯವನ್ನೂ ಒದಗಿಸುತ್ತಾನೆ. ಜ್ಯೋತಿಷ್ಯದ ಪ್ರಕಾರ ನಮ್ಮ ವೃತ್ತಿ ಜೀವನಕ್ಕೆ ಸರಿಯಾದ ನಿರ್ದೇಶನವನ್ನು ನೀಡುವ ಕೆಲಸವನ್ನು ಸೂರ್ಯದೇವ ಮಾತ್ರ ಮಾಡುತ್ತಾನೆ. ಪ್ರತಿ ಭಾನುವಾರ ಉಪವಾಸವನ್ನು ಆಚರಿಸಿದರೆ ಜಾತಕದಲ್ಲಿ ಸೂರ್ಯನ ಸ್ಥಾನವು ಉತ್ತಮವಾಗಿರುತ್ತದೆ. ಭಾನುವಾರ ಉಪವಾಸ ಮಾಡುವುದರಿಂದ ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚುತ್ತದೆ.
