ವಿಷ್ಣು ಸಹಸ್ರನಾಮದ ಮಹತ್ವ | The significance of the Vishnu Sahasranama in kannada
[…]
ವಿಷ್ಣು ಸಹಸ್ರನಾಮದ ಮಹತ್ವ | The significance of the Vishnu Sahasranama in kannada Read More »
ಪೃಥ್ವಿ, ಆಪ ತೇಜ ಇತ್ಯಾದಿ ಪಂಚಭೂತಗಳಿಗೆ ಅಧಿದೇವತೆಗಳಾದ ಗಣೇಶ, ದುರ್ಗಾ, ಸೂರ್ಯ, ವಿಷ್ಣು ಹಾಗೂ ಶಿವ ಈ ಐದು ದೇವತೆಗಳನ್ನೇ ಒಟ್ಟಿಗೆ ಸೇರಿಸಿ ಸಮಷ್ಟಿಯಾಗಿ ‘ಪಂಚಾಯತನ’ ಎಂದು ಕರೆದು ಪೂಜಿಸುವ ಪದ್ಧತಿ ಬಹುತೇಕ ಎಲ್ಲ ಗೃಹಸ್ಥರ ಮನೆಗಳಲ್ಲಿ ಹಾಗೂ ಮಠಮಾನ್ಯಗಳಲ್ಲಿ ಪ್ರಚಲಿತವಿದೆ. ಈ ಐದು ದೇವತೆಗಳ ಸಮಷ್ಟಿರೂಪವೇ ಪರಬ್ರಹ್ಮತತ್ವ (ಗಾಯತ್ರಿ) ಆಗಿದೆ. ಗಾಯತ್ರೀ ದೇವಿಯ ಶಿರದಲ್ಲಿರುವ ಚಂದ್ರಮೌಳಿಯು ಸಚ್ಚಿದಾನಂದ ತತ್ವವನ್ನು ಸೂಚಿಸುತ್ತದೆ. ತಾವರೆ ಹೂವಿನ ಮೇಲೆ ಗಾಯತ್ರಿ ಕುಳಿತಿರುತ್ತಾಳೆ. ಈ ತಾವರೆಯು ಕೆಸರಿನಲ್ಲಿ ಹುಟ್ಟಿ ನೀರಿನಲ್ಲೇ ಬೆಳೆದು ನಿಂತಿದ್ದರೂ ಕೆಸರು ಅಥವಾ ನೀರನ್ನು ತನಗೆ ಮೆತ್ತಿಸಿಕೊಳ್ಳುವುದಿಲ್ಲ. ಹೀಗೆ ಸಂಸಾರಸಾಗರದಲ್ಲಿ ಜನಿಸಿದ ಮಾನವನು ಸಂಸಾರದ ಭಾಗವಾದ ರಾಗ-ದ್ವೇಷಾದಿಗಲನ್ನು ಅಚಿಟಿಸಿಕೊಳ್ಳದೇ ಅಲಿಪ್ತನಾಗಿಯೇ ಉಳಿದು ಬ್ರಹ್ಮತತ್ವವನ್ನು ಹೊಂದಲು ಪ್ರಯತ್ನಿಸಬೇಕೆಂಬುದೇ ಇದರ ಗೂಢಾರ್ಥವಾಗಿದೆ.
ಗಾಯತ್ರಿ ಮಂತ್ರ । Gayathri Mantra in Kannada Read More »