ಹಿಂದುಗಳ ಪಾಲಿಗೆ ಅಮಾವಾಸ್ಯೆ ಹುಣ್ಣಿಮೆಯಿಂದ ಇಡಿದು ಪ್ರತಿದಿನ ಒಂದು ರೀತಿ ಹಬ್ಬವೇ.ವರ್ಷದಲ್ಲಿ ಅದು ಎಷ್ಟೋ ಸಾಲು ಸಾಲು ಹಬ್ಬಗಳನ್ನು ಆಚರಿಸುತ್ತಿವಿ.ಪ್ರತಿ ಹಬ್ಬಗಳಿಗೂ ಒಂದೊಂದು ವಿಶೇಷತೆಯಿದೆ.ಹಬ್ಬದ ಹಿಂದೆ ತನ್ನದೇ ಅದ ಪುರಾಣ ಕಥೆಗಳು ಇವೇ. ಹಬ್ಬ ಬಂದರೆ ಸಾಕು ಮನೆ ಮನೆಯಲ್ಲಿ ಸಂಭ್ರಮ. ಯಾವುದೇ ಹಬ್ಬ ಅಥವಾ ಶುಭಕಾರ್ಯ ಇರಲಿ ತೋರಣ ಮಾತ್ರ ಸಾಮಾನ್ಯವಾಗಿದೆ. ಮನೆಗೆ ತೋರಣ ಕಟ್ಟಿದ ನಂತರ ಮಾಡುವ ಕಾರ್ಯಕ್ಕೆ ಕಳೆ ಬರುವುದು.ಹಾಗಾದರೆ ಶುಭ ಕಾರ್ಯದ ದಿನ ತೋರಣ ಕಟ್ಟುವುದು ಯಾಕೆ ಎಂದು ತಿಳಿದುಕೊಳ್ಳೋಣ ಬನ್ನಿ.
- ಮಾವು ಎನ್ನುವುದು ಒಂದು ಶುಭದ ಸಂಕೇತ. ಮಾವಿನ ಎಲೆಯಲ್ಲಿ ದೇವಾನುದೇವತೆಗಳು ನೆಲೆಸಿರುತ್ತಾರೆ. ಇದೇ ಕಾರಣಕ್ಕೆ ದೇವರ ಪೂಜೆಯಾ ವೇಳೆ ಮಾವಿನ ಎಲೆಗೆ ಅಷ್ಟು ಪ್ರಾಮುಖ್ಯತೆ ಇದೆ.
- ಮಾವು ನಿದ್ರಾಹೀನತೆಯನ್ನು ದೂರಮಾಡುತ್ತದೆ. ಹಬ್ಬದ ಸಂದರ್ಭದಲ್ಲಿ ಕೆಲಸದ ಒತ್ತಡವನ್ನು ಶ್ರಮವನ್ನು ಹೋಗಲಾಡಿಸುವುದು ಇದೆ ಮಾವಿನ ತೋರಣ.ಬಯಕೆಗಳನ್ನು ಈಡೇರುಸುವುದು ಕೂಡ ಮಾವಿನ ತೋರಣವೇ ಮುಂದೆ ಇದೆಯಂತೆ.
- ಹಬ್ಬಗಳಲ್ಲಿ ಹೂವುಹಣ್ಣು ಕಾಯಿ ವಿಳೇದೆಲೆ ಬಾಳೆ ಎಲೆ ಬೇಕೇ ಬೇಕು.ಅದರಲ್ಲೂ ವಿಶೇಷವಾಗಿ ಮಾವಿನ ತೋರಣ ಇರಲೇ ಬೇಕು. ಶುಭಕಾರ್ಯಗಳಲ್ಲಿ ಇದು ಇರಲೇ ಬೇಕು.ತೋರಣಕ್ಕೆ ಮಾವಿನ ಎಲೆಯನ್ನು ಮಾತ್ರ ಬಳಸುವುದು.
- ಮಾವಿನ ತೋರಣವನ್ನು ಬಾಗಿಲಿಗೆ ಕಟ್ಟುವುದರ ಹಿಂದೆಯೂ ಹತ್ತಾರು ಕಥೆಗಳು ಇವೇ. ಕೆಟ್ಟ ದೃಷ್ಟಿಯಿಂದ ರಕ್ಷಣೆ ಮಾಡಿಕೊಳ್ಳುವುದಕ್ಕೆ ಮಾವಿನ ತೋರಣವನ್ನು ಕಟ್ಟುವುದು.ಮನೆಯಲ್ಲಿ ತೋರಣ ಕಟ್ಟಿದರೆ ಸಕಲ ಸೌಭಾಗ್ಯವು ಕೂಡ ಒಲಿದು ಬರುತ್ತದೆ.ಹಬ್ಬ ಮುಗಿದ ನಂತರ ಮಾವಿನ ತೋರಣ ಒಣಗುತ್ತದೆ.ಒಣಗಿದ ಎಲೆ ಮನೆಯಲ್ಲಿ ಇರುವುದು ಒಳ್ಳೆಯದಲ್ಲ.ಒಣಗಿದ ತೋರಣದ ಎಲೆಯನ್ನು ತೆಂಗಿನ ಬುಡಕ್ಕೆ ಹಾಕುವುದು ಒಳ್ಳೆಯದು.
- ಮನೆ ಬಾಗಿಲಿಗೆ ತೋರಣ ಕಟ್ಟುವುದು ದೇವಾನು ದೇವತೆ ಗಳನ್ನು ಸ್ವಾಗತಿಸುವುದು ಎಂದು ಅರ್ಥ.ಹಾಗಾಗಿ ಹೋಸ್ತಿಲ ಪೂಜೆ ಮಾಡಿ ಬಾಗಿಲೆಗೆ ತೋರಣ ಕಟ್ಟಿ.ದೇವರ ಮನೆಯ ಬಾಗಿಲ ಹೊಸ್ತಿಲಲ್ಲಿ ಶ್ರೀ ನರಸಿಂಹಸ್ವಾಮಿ ಸ್ಥಿತನಾಗಿ ಇರುತ್ತಾನೆ ಎನ್ನುವ ನಂಬಿಕೆ ಇದೆ.ದೇವನು ದೇವತೆಗಳು ಮನೆಯ ಮುಖ್ಯದ್ವಾರದಿಂದ ಬಾಗಿಲನ್ನು ಪ್ರವೇಶ ಮಾಡುವುದು.
