💮ದುಷ್ಟ ಶಕ್ತಿಗಳಿಂದ ಕಾಪಾಡುವ ಶಕ್ತಿಶಾಲಿ ನರಸಿಂಹ ಮಂತ್ರಗಳು💮
Index of Important Points
🍁ಮಹಾವಿಷ್ಣುವಿನ ನಾಲ್ಕನೆಯ ಅವತಾರವೇ ನರಸಿಂಹ ಸ್ವರೂಪ. ಅಸುರ ರಾಜ ಹಿರಣ್ಯಕಶಿಪುವನ್ನು ವಧಿಸುವುದಕ್ಕಾಗಿ ಮಹಾವಿಷ್ಣುವು ನರಸಿಂಹನ ಅವತಾರವನ್ನು ತಾಳಿದ್ದಾರೆ. ವಿಷ್ಣು ಭಕ್ತ ಪ್ರಹ್ಲಾದನ ತಂದೆಯೇ ಅಸುರ ರಾಜ ಹಿರಣ್ಯ ಕಶಿಪು. ತನ್ನ ತಮ್ಮನನ್ನು ವಧಿಸಿದ್ದು ವಿಷ್ಣು ಎಂಬ ಕಾರಣಕ್ಕಾಗಿ ಹಿರಣ್ಯಕಶಿಪುವಿಗೆ ವಿಷ್ಣು ಎಂದರೆ ಕೆಂಡಮಂಡಲಾ ಕೋಪ. ವಿಷ್ಣುವಿನ ಹೆಸರು ಕೇಳಿದರೆ ಸಾಕು ಅಂತಹವರನ್ನು ಕೂಡಲೇ ವಧಿಸುತ್ತಿದ್ದ. ತನ್ನ ಪುತ್ರ ವಿಷ್ಣು ಭಕ್ತ ಎಂದೊಡನೆ ಹಿರಣ್ಯಕಶಿಪು ಕೋಪದಿಂದ ಕುದಿದು ಮಗನನ್ನು ಕೊಲ್ಲಲು ಹಲವಾರು ವಿಧಾನಗಳನ್ನು ಪ್ರಯೋಗಿಸುತ್ತಾನೆ. ಆದರೆ ವಿಷ್ಣುವು ಬಾಲಕ ಪ್ರಹ್ಲಾದನನ್ನು ಕಾಪಾಡುತ್ತಾರೆ. ತನ್ನ ವಧೆಗೆ ನರಸಿಂಹನನ್ನೇ ಹಿರಣ್ಯಕಶಿಪು ಆಯ್ಕೆ ಮಾಡಿದ್ದಾದರೂ ಏಕೆ?
🍁ಚಾಣಾಕ್ಷ ಹಿರಣ್ಯಕಶಿಪು ಉಗ್ರ ತಪಸ್ಸನ್ನು ಆಚರಿಸಿ ಬ್ರಹ್ಮನಿಂದ ವರವನ್ನು ಪಡೆದುಕೊಂಡಿರುತ್ತಾನೆ. ಪ್ರಾಣಿಯಾಗಲೀ ಮನುಷ್ಯನಾಗಲೀ, ಹಗಲಲ್ಲೇ ಆಗಲಿ ರಾತ್ರಿಯಲ್ಲೇ ಆಗಲಿ, ಆಕಾಶ ಇಲ್ಲವೆ ಭೂಮಿಯಲ್ಲಾಗಲೀ ತನ್ನ ವಧೆ ನಡೆಯಬಾರದೆಂಬ ವಿಚಿತ್ರ ಬೇಡಿಕೆಯನ್ನು ಮುಂದಿಡುತ್ತಾನೆ. ಅದರಂತೆಯೇ ಈತನನ್ನು ವಧಿಸಲು ಮಹಾವಿಷ್ಣುವೇ ಸರಿ ಎಂಬುದಾಗಿ ದೇವತೆಗಳು ನಿಶ್ಚಯಿಸಿ ಇದಕ್ಕಾಗಿ ಹರಿಯನ್ನು ಬೇಡಿಕೊಳ್ಳುತ್ತಾರೆ. ಮಗು ಪ್ರಹ್ಲಾದನನ್ನು ನಿನ್ನ ವಿಷ್ಣು ಎಲ್ಲಿದ್ದಾನೆ ಎಂದು ಕೇಳುತ್ತಾ ಕೇಳುತ್ತಾ ಒಂದೊಂದೇ ಕಂಬವನ್ನು ಹಿರಣ್ಯಕಶಿಪು ಭಗ್ನಪಡಿಸುತ್ತಾನೆ, ಆಗ ನಡೆಯಿತು ಯಾರೂ ಊಹಿಸದಂತಹ ಘಟನೆ
🌼”ಯಾರೂ ಕಂಡರಿಯದ ವಿಚಿತ್ರ ರೂಪ”
🍁ಆ ಸಂದರ್ಭದಲ್ಲಿ ಹಿಂದೆಂದೂ ಘಟಿಸದಿದ್ದಂತಹ ಘಟನೆಯೊಂದು ನಡೆದುಹೋಗುತ್ತದೆ. ಒಡನೆಯೇ ಭೂಕಂಪನದಂತಹ ಅನುಭವವಾಗುತ್ತದೆ. ಸ್ತಂಭವು ಎರಡಾಗಿ ಸೀಳಿಕೊಳ್ಳುತ್ತದೆ ಹಾಗೂ ಆ ಸ್ತಂಭದೊಳಗಿನಿಂದ ಹಿಂದೆಂದೂ, ಯಾರೂ ಕಂಡರಿಯದ ವಿಚಿತ್ರ ರೂಪದ, ಅತ್ತ ನರನೂ ಅಲ್ಲದ, ಇತ್ತ ಪ್ರಾಣಿಯೂ ಅಲ್ಲದ ಜೀವಿಯೊಂದು ಆವಿರ್ಭವಿಸುತ್ತದೆ. ಅದೇ ಭಗವಾನ್ ವಿಷ್ಣುವಿನ “ನರಸಿಂಹನ” ಅವತಾರವಾಗಿರುತ್ತದೆ. ನರಸಿಂಹ ಅವತಾರದಲ್ಲಿ ಭಗವಾನ್ ವಿಷ್ಣುವಿನ ಶರೀರ ಅಥವಾ ಮುಂಡದ ಭಾಗವು ನರನದ್ದಾಗಿದ್ದು, ಶಿರೋಭಾಗವು “ಸಿಂಹ” ಅರ್ಥಾತ್ ಮೃಗದ್ದಾಗಿರುತ್ತದೆ.
🍁ಹಿರಣ್ಯಕಶಿಪುವೆಂಬ ಮಹಾದೈತ್ಯನ ಸಂಹಾರ ಸಿಂಹ ಮತ್ತು ಮನುಷ್ಯನ ರೂಪಲ್ಲಿದ್ದ ನರಸಿಂಹ ಸ್ವಾಮಿಯು ಘರ್ಜಿಸುತ್ತಾ ಹಿರಣ್ಯಕಶಿಪುವೇ ನೋಡು, ಈ ಹೊತ್ತು ಈಗ ಹಗಲೂ ಅಲ್ಲ, ರಾತ್ರಿಯೂ ಅಲ್ಲ. ಇದು ಮುಸ್ಸಂಜೆ ಹೊತ್ತು ಅರ್ಥಾತ್ ಸಂಧ್ಯಾಕಾಲವಾಗಿದೆ. ಹೀಗೆಂದು ಹೇಳುತ್ತಾ ಭಗವಾನ್ ವಿಷ್ಣುವಿನ ಅವತಾರವಾಗಿರುವ ನರಸಿಂಹನ ಅವತಾರವು ತನ್ನ ಹರಿತವಾದ ನಖಗಳಿಂದ ಹಿರಣ್ಯಕಶಿಪುವಿನ ಉದರವನ್ನು ಬಗೆದು ಆತನ ಕರುಳುಗಳನ್ನು ತನ್ನ ಕೊರಳಲ್ಲಿ ಮಾಲೆಯ ರೂಪದಲ್ಲಿ ಧರಿಸಿಕೊಂಡು ಹಿರಣ್ಯಕಶಿಪುವಿನ ಮೃತದೇಹವನ್ನು ದೂರ ಒಗೆಯುತ್ತಾನೆ. ಹೀಗೆ ಹಿರಣ್ಯಕಶಿಪುವೆಂಬ ಮಹಾದೈತ್ಯನ ಸಂಹಾರವಾಗುತ್ತದೆ.
🍁ನರಸಿಂಹನನ್ನು ಭಕ್ತರು ಬೇಡಿಕೊಂಡು ದೇವರ ಅನುಗ್ರಹವನ್ನು ಪಡೆದುಕೊಳ್ಳಲು ಉಪವಾಸವನ್ನು ಕೈಗೊಳ್ಳುತ್ತಾರೆ. ಭಕ್ತರು ಸಂಕಷ್ಟದಲ್ಲಿರುವಾಗ ನರಹರಿಯನ್ನು ಬೇಡಿಕೊಳ್ಳುವುದರಿಂದ ಸರ್ವ ದುರಿತಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಅವರದ್ದಾಗಿದೆ. ದೇವರ ಅನುಗ್ರಹವನ್ನು ಪಡೆದುಕೊಳ್ಳಲು ನಿರ್ದಿಷ್ಟ ಮಂತ್ರಗಳಿದ್ದು ಅದನ್ನು ಉಚ್ಛರಿಸಿಕೊಂಡು ಪೂಜೆಗಳನ್ನು ನಡೆಸುವುದರಿಂದ ಭಕ್ತರ ಇಷ್ಟಾರ್ಥ ನೆರವೇರುತ್ತದೆ.
🌼”ನರಸಿಂಹ ಮಹಾ ಮಂತ್ರ”
ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವೋತೋ ಮುಖಂ |
ನೃಸಿಂಹಂ ಭೀಷಣಂ ಭದ್ರಂ ಮೃತ್ಯುರ್ಮೃತ್ಯುರ್ ನಮಾಮ್ಯಹಂ ||
ಭಗವಾನ್ ಮಹಾವಿಷ್ಣುವೇ! ನೀವು ಕೋಪೋದ್ರುಕ್ತರು ಮತ್ತು ಪರಾಕ್ರಮಿಗಳು. ನೀವು ಶಾಖ ಮತ್ತು ಬೆಂಕಿಯನ್ನು ಉತ್ಪಾದಿಸುತ್ತೀರಿ. ಮರಣವನ್ನು ವಶಪಡಿಸಿಕೊಳ್ಳುವ ಸಾಮರ್ಥ್ಯ ನಿಮ್ಮಲ್ಲಿದೆ. ನಾನು ನಿಮಗೆ ಶರಣು. ಈ ಮಂತ್ರವನ್ನು ಜಪಿಸುವುದರಿಂದ ನರಸಿಂಹನ ಕೃಪಾಕಟಾಕ್ಷ ನಮಗೆ ದೊರೆಯಲಿದೆ. ಹಿರಣ್ಯಕಶಿಪುವನ್ನು ದೇವರು ವಧಿಸಿದಂತೆಯೇ ನಮ್ಮ ಸಂಕಷ್ಟಗಳನ್ನು ಆತ ದೂರಮಾಡಲಿದ್ದಾರೆ.
🌼 “ನರಸಿಂಹ ಪ್ರಣಮಂ ಪ್ರಾರ್ಥನೆ”
ನಮಸ್ತೇ ನರಸಿಂಹಾಯ ಪ್ರಹ್ಲಾದದಾಯಿನೇ |
ಹಿರಣ್ಯಕಶಿಪೋರ್ವಕ್ಷಃ ಶಿಲಾಟಂಕ ನಖಾಲಯೇ ||
ಇತೋ ನೃಸಿಂಹಃ ಪರತೋ ನೃಸಿಂಹ, ಯತೋ ಯತೋ ಯಾಮಿ ತತೋ ನೃಸಿಂಹಃ |
ಬಹಿರ್ ನೃಸಿಂಹೋ ಹೃದಯೇ ನೃಸಿಂಹೋ ನೃಸಿಂಹಂ ಆದಿಂ ಶರಣಂ ಪ್ರಪದ್ಯೇ ||
ದೇವರೇ ನಿಮಗೆ ನಾನು ವಂದನೆಗಳನ್ನು ಅರ್ಪಿಸುತ್ತೇನೆ. ಪ್ರಹ್ಲಾದನ ಸಂತೋಷವೇ ನೀವಾಗಿದ್ದೀರಿ. ನಿಮ್ಮ ಉಗುರುಗಳು ದುಷ್ಟ ಹಿರಣ್ಯಕಶಿಪುವಿನ ಎದೆಯನ್ನು ಬಗೆದಿದೆ. ಈ ಗುಂಡಿಗೆಯನ್ನು ಕಲ್ಲುಗಳಿಂದ ಮಾಡಿರುವಂತಹದ್ದಾಗಿದ್ದರೂ ನೀವು ಅದನ್ನು ಮುರಿದು ಹಂತಕನ್ನು ಮುಗಿಸಿದ್ದೀರಿ. ನರಸಿಂಹ ಎಂದೆಂದೂ ಇಲ್ಲೇ ಇರುತ್ತಾರೆ. ಎಲ್ಲೆಲ್ಲೂ ಆತನೇ ಇರುತ್ತಾರೆ. ನಾನು ಎಲ್ಲೇ ಹೋದರೂ ಭಗವಂತನ ಕೃಪೆ ನನ್ನ ಮೇಲಿರುತ್ತದೆ. ಜಗತ್ತಿನ ಹೊರಗೆ ಮತ್ತು ನನ್ನ ಹೃದಯದಲ್ಲಿ ಆ ದೇವರು ನೆಲೆಸಿದ್ದಾರೆ. ನಿಮಗೆ ಭಗವಂತಹ ಅನುಗ್ರಹ ದೊರೆಯುತ್ತದೆ.
🌼”ದಶಾವತಾರ ಸ್ತೋತ್ರ”
ತವ ಕರ ಕಮಲಾವರೇ ನಖಂ ಅದ್ಬುತ ಶೃಂಗಂ |
ದಲಿತಾ ಹಿರಣ್ಯಕಶಿಪು ತನು ಭೃಂಗಂ |
ಕೇಶವ ಧಾರ್ತಾ, ನರಹರೀ ರೂಪಾ ಜಯ ಜಗದೀಶಾ ಹರೇ ||
ಓ ಭಗವಾನ್ ಕೇಶವ, ಅರ್ಧಸಿಂಹ ಮತ್ತು ಅರ್ಧ ಮಾನವ ಅವತಾರವನ್ನು ಎತ್ತಿದ ಭಗವಂತನಿಗೆ ಕೈಯೆತ್ತಿ ನಾನು ಮುಗಿಯುತ್ತೇನೆ. ಸುಂದರ ತಾವರೆಗಳನ್ನು ಪ್ರತಿನಿಧಿಸುವ ನೆಲದಲ್ಲಿ ನೀವು ಹಿರಣ್ಯಕಶಿಪುವನ್ನು ವಧಿಸಿದ್ದೀರಿ.
🌼 “ದಿವ್ಯ ಪ್ರಬಂಧಂ”
ಆದಿ ಆದಿ ಅಗಂ ಕರೈಂದು ಇಸೈ ಪದೀಪ್ ಪದೀಕ್ ಕನ್ನೀರ್ ಮಲ್ಗಿ |
ಎಂಗುಮ್ ನಾದಿ ನಾದಿ ನರಸಿಂಗ ಎನ್ರು, ವಾದಿ ವಾದುಂ ಇವಾಲ್ ನುದಾಲೆ ||
ನಿಮ್ಮನ್ನು ಕಾಣುವವರೆಗೆ ನನ್ನ ಹೃದಯ ದ್ರವಿಸುವವರೆಗೆ ನಾನು ನರ್ತಿಸುತ್ತೇನೆ, ನೀವು ಕಾಣುವುದಿದ್ದರೆ ಕಣ್ಣೀರಿನಿಂದ ತುಂಬಿದ ಕಣ್ಣುಗಳಿಂದ ನಿಮ್ಮ ನಾಮವನ್ನು ಸ್ತೋತ್ರವನ್ನು ನಾನು ಪಠಿಸುತ್ತೇನೆ. ನಿಮ್ಮನ್ನು ಕಾಣುವ ಆಸೆಯನ್ನು ನಾನು ಹೊಂದಿದ್ದೇನೆ. ಓ ನರಸಿಂಹ ದೇವರೇ.
🌼 “ನರಸಿಂಹ ಗಾಯತ್ರೀ ಮಂತ್ರ”
ಓಂ ವಜ್ರನಖಾಯ ವಿದ್ಮಹೇ ತೀಕ್ಷ್ಣದಂಷ್ಟ್ರಾಯ ಧೀಮಹೀ ತನ್ನೋ ನರಸಿಂಹಃ ಪ್ರಚೋದಯಾತ್
ನರಸಿಂಹ ರೂಪದಲ್ಲಿರುವ ದೇವರಿಗೆ ಇದೋ ನಮ್ಮ ವಂದನೆಗಳು. ನಮ್ಮ ಒಳ್ಳೆಯ ಕೆಲಸಗಳಿಗೆ ಆಶೀರ್ವಾದವನ್ನು ನೀಡುವ ಭಗವಂತನೇ ನಮ್ಮಲ್ಲಿರುವ ದುಷ್ಟತನವನ್ನು ಹೋಗಲಾಡಿಸಿ. ಅವರ ಚೂಪಾದ ಉಗುರು ಮತ್ತು ಹಲ್ಲುಗಳನ್ನು ನೆನೆಯೋಣ.
🌼 “ನರಸಿಂಹ ಪ್ರಪತ್ತಿ”
ಮಾತಾ ನೃಸಿಂಹಶ್ಚ, ಪಿತಾ ನೃಸಿಂಹೋ |
ಭ್ರಾತಾ ನೃಸಿಂಹಶ್ಚ, ಸಖಾ ನೃಸಿಂಹಃ |
ವಿದ್ಯಾ ನೃಸಿಂಹೋ, ದ್ರವಿಣಂ ನೃಸಿಂಹಃ |
ಸ್ವಾಮಿ ನೃಸಿಂಹಃ, ಸಕಲಂ ನೃಸಿಂಹಃ ||
ಇತೋ ನೃಸಿಂಹಃ, ಪರತೋ ನೃಸಿಂಹೋ |
ಯತೋ ಯತೋ ಯಾಮಿ, ತತೋ ನೃಸಿಂಹಃ |
ನೃಸಿಂಹ ದೇವಾದಪರಂ ನ ಕಿಂಚಿತ್ |
ತಸ್ಮಾನ್ ನೃಸಿಂಹ ಶರಣಂ ಪ್ರಪದ್ಯೇ ||
ನನಗೆ ಭಗವಾನ್ ನರಸಿಂಹರೇ ತಾಯಿ, ತಂದೆ, ಸಹೋದರ, ಮಿತ್ರರು ಆಗಿದ್ದಾರೆ. ವಿಶ್ವದಲ್ಲಿರುವ ಬುದ್ಧಿಮತ್ತೆ ಮತ್ತು ಧನಕನಕ ಸಂಪತ್ತು ಅವರೇ ಆಗಿದ್ದಾರೆ. ನನಗೆ ಗುರುಗಳು ಮಾರ್ಗದರ್ಶಿಗಳು ಅವರಾಗಿದ್ದಾರೆ. ನಾನು ಎಲ್ಲೇ ಹೋದರೂ ಅಲ್ಲಿ ಭಗವಾನ್ ನನ್ನೊಂದಿಗೆ ಇರುತ್ತಾರೆ. ಅವರೇ ಮಹಾನ್ ಆಗಿದ್ದು ಅವರಿಗಿಂತ ಶ್ರೇಷ್ಠರು ಬೇರೊಬ್ಬರಿಲ್ಲ. ನಾನು ನಿನಗೆ ಶರಣಾಗಿರುವೆ ಭಗವಾನ್ ನರಸಿಂಹ. ನಿಮಗೆ ಭಯವಾಗಿದ್ದಲ್ಲಿ ಮತ್ತು ನೀವು ಆಪತ್ತಿನಲ್ಲಿದ್ದರೆ ಈ ಮಂತ್ರವನ್ನು ಉಚ್ಛರಿಸಿದರೆ ಭಗವಾನ್ ನರಸಿಂಹ ನಿಮ್ಮನ್ನು ಕಾಪಾಡುತ್ತಾರೆ. ಎಲ್ಲಾ ಆಪತ್ತಿನಿಂದ ನಿಮ್ಮ ರಕ್ಷಣೆಯನ್ನು ಈ ಮಂತ್ರವು ಮಾಡಲಿದೆ.
🌼 ನರಸಿಂಹ ಮಂತ್ರಗಳ ಜಪ ಪ್ರಯೋಜನಗಳು
🌹 ನರಸಿಂಹ ಮಂತ್ರಗಳನ್ನು ಪಠಿಸುವುದರಿಂದ ಎಲ್ಲಾ ರೀತಿಯ ಭಯ ಮತ್ತು ಆತಂಕಗಳು ನಿವಾರಣೆಯಾಗುತ್ತವೆ.
🌹 ನರಸಿಂಹ ಮಂತ್ರಗಳನ್ನು ಪಠಿಸುವುದರಿಂದ ಮನಸ್ಸಿನ ಮೇಲೆ ಸೂಕ್ಷ್ಮ ರೀತಿಯಲ್ಲಿ ಕೆಲಸ ಮಾಡತ್ತದೆ ಮತ್ತು ಧೈರ್ಯ, ವಿಶ್ವಾಸ, ನಂಬಿಕೆ ಮತ್ತು ನಿರ್ಭಯತೆಯನ್ನು ನೀಡುತ್ತದೆ.
🌹 ನರಸಿಂಹ ಮಂತ್ರಗಳನ್ನು ಪಠಿಸುವುದರಿಂದ ಶತ್ರುಗಳನ್ನು ನಿಗ್ರಹಿಸಲು ಮತ್ತು ಅವರ ದುಷ್ಟ ಕಥಾವಸ್ತುವಿನಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ.
🌹 ನರಸಿಂಹ ಮಂತ್ರಗಳನ್ನು ಪಠಿಸುವುದರಿಂದ ಎಲ್ಲಾ ದುಷ್ಟ ಮತ್ತು ಅಪಾಯಗಳಿಂದ ರಕ್ಷಿಸುವಲ್ಲಿ ಗುರಾಣಿಯಂತೆ ಕಾರ್ಯನಿರ್ವಹಿಸುತ್ತವೆ.
🌹 ನರಸಿಂಹ ಮಂತ್ರಗಳನ್ನು ಪಠಿಸುವುದರಿಂದ ನಮ್ಮ ಸುತ್ತಲೂ ಸಕಾರಾತ್ಮಕ ಕಂಪನಗಳನ್ನು ಗ್ರಹಿಸುತ್ತದೆ ಮತ್ತು ಮನೆಗಳು ಮತ್ತು ವ್ಯಾಪಾರ ಸ್ಥಳಗಳಿಂದ ನಕಾರಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ.
🌹ನರಸಿಂಹ ಮಂತ್ರಗಳನ್ನು ಪಠಿಸುವುದರಿಂದ ಮನೆ ಅಥವಾ ಕಚೇರಿಯ ಸದಸ್ಯರ ಸಾಮಾನ್ಯ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಮತ್ತು ಸಂತೋಷ ಮತ್ತು ಸಮೃದ್ಧಿಯನ್ನು ನೀಡುತ್ತದೆ.
🌹 ನರಸಿಂಹ ಮಂತ್ರಗಳನ್ನು ಪಠಿಸುವುದರಿಂದ ಭಕ್ತರ ಎಲ್ಲಾ ಆಸೆಗಳನ್ನು ಈಡೇರಿಸುತ್ತದೆ ಮತ್ತು ಅಂತಿಮ ಆಧ್ಯಾತ್ಮಿಕ ಗುರಿಯಾದ ವಿಮೋಚನೆಯ ಕಡೆಗೆ ಕರೆದೊಯ್ಯುತ್ತದೆ.
🌹 ಭಗವಾನ್ ನರಸಿಂಹ ಉಗ್ರ ಅಭಿವ್ಯಕ್ತಿ. ಆದಾಗ್ಯೂ, ಅವನು ತುಂಬಾ ಸಹಾನುಭೂತಿ ಮತ್ತು ಕರುಣಾಮಯಿ. ಆದ್ದರಿಂದ ನರಸಿಂಹನ ಮಂತ್ರವು ಯಶಸ್ಸು ಮತ್ತು ರಕ್ಷಣೆಗಾಗಿ ಭಗವಂತನ ಆಶೀರ್ವಾದವನ್ನು ಗೆಲ್ಲಲು ಸಹಾಯ ಮಾಡುತ್ತದೆ.
🌼ನರಸಿಂಹ ಮಂತ್ರವನ್ನು ಹೇಗೆ ಜಪಿಸಬೇಕು
ಭಗವಾನ್ ನರಸಿಂಹನ ಮಂತ್ರಗಳನ್ನು ಜಪಿಸಲು ಉತ್ತಮ ಸಮಯವೆಂದರೆ ಮುಂಜಾನೆ ಬ್ರಾಹ್ಮೀ ಮುಹೂರ್ತ ಸಮಯದಲ್ಲಿ (ಬೆಳಿಗ್ಗೆ 4 ರಿಂದ ಬೆಳಿಗ್ಗೆ 6 ರವರೆಗೆ). ಈ ಸಮಯದಲ್ಲಿ, ಮನಸ್ಸು ಶಾಂತ ಮತ್ತು ಪ್ರಶಾಂತವಾಗಿರುತ್ತದೆ ಮತ್ತು ದೇವತೆಯನ್ನು ಸುಲಭವಾಗಿ ಕೇಂದ್ರೀಕರಿಸಬಹುದು. ಭಗವಂತನ ಆಶೀರ್ವಾದವನ್ನು ಪಡೆಯುವ ಸಲುವಾಗಿ ಈ ಸಮಯದಲ್ಲಿ ಮನಸ್ಸು ಸಹ ಹೆಚ್ಚು ಗ್ರಹಿಸುತ್ತದೆ. ಧ್ಯಾನಕ್ಕೆ ಚಾಪೆಯ ಮೇಲೆ ಪೂರ್ವಾಭಿಮುಖವಾಗಿ ಕುಳಿತು ನಿಮ್ಮ ಮುಂದೆ ಭಗವಾನ್ ನರಸಿಂಹ ಚಿತ್ರವನ್ನು ಇರಿಸಿ. ಭಗವಂತನ ಸ್ವರೂಪವನ್ನು ಕೇಂದ್ರೀಕರಿಸಿ ಮತ್ತು ಸರಿಯಾದ ಉಚ್ಚಾರಣೆಯನ್ನು ಖಾತ್ರಿಪಡಿಸಿಕೊಂಡು ಮಂತ್ರಗಳನ್ನು ಪುನರಾವರ್ತಿಸಿ. ಅವುಗಳಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಮಂತ್ರಗಳ ಅರ್ಥವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಜಪಗಳ ಎಣಿಕೆಗೆ ತುಳಸಿ ಮಣಿ ಜಪ ಮಾಲಾ ಬಳಸಿ. 108 ಅಥವಾ ಹೆಚ್ಚು ಬಾರಿ ಸಾಧ್ಯವಾದಷ್ಟು ಬಾರಿ ಪಠಿಸಿ. ದಿನದಿಂದ ದಿನಕ್ಕೆ ಪಠಣ ಎಣಿಕೆ ಹೆಚ್ಚಿಸಿ. ಈ ಮಂತ್ರ ಸಾಧನವನ್ನು ನೀವು 21 ದಿನಗಳಿಂದ 40 ದಿನಗಳವರೆಗೆ ಮುಂದುವರಿಸಬಹುದು.
Lakshmi Narasimha Karavalamba Stotra | ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರ
ಜೀವನದಲ್ಲಿ ನೀವು ಪ್ರಗತಿ ಕಾಣುತ್ತಿದ್ದರೆ ಹಿತ ಶತ್ರುಗಳು ಜಾಸ್ತಿ ಆಗುತ್ತಾರೆ. ಇದರಿಂದ ನಿಮಗೆ ಕಷ್ಟಗಳು ಹೆಚ್ಚಾಗುತ್ತದೆ ಹಾಗು ಮಾಟ-ಮಂತ್ರದ ಪ್ರಭಾವಗಳು, ದುಷ್ಟಶಕ್ತಿಗಳ ಪ್ರಭಾವ ನಮ್ಮ ಮೇಲೆ ಬೀಳುತ್ತದೆ. ಇದರಿಂದ ತಪ್ಪಿಸಿಕೊಳ್ಳಬೇಕೆಂದರೆ ಲಕ್ಷ್ಮಿ ನರಸಿಂಹ ಕರಾವಲಂಬ ಸ್ತೋತ್ರ ಕೇಳುತ್ತಾ ಬಂದರೆ ಶತ್ರುಗಳ ಬಾದೆ ದೂರವಾಗುತ್ತದೆ.
ಯಾರಾದರೂ ಮಾಟ ಮಂತ್ರ ಪ್ರಯೋಗ ಮಾಡಿದರೆ ಅಥವಾ ದುಷ್ಟಶಕ್ತಿಗಳು ಪರಿಣಾಮ ಬೀರುತ್ತಿದ್ದರೆ ನೀವು ಪ್ರತಿನಿತ್ಯ ಪಠಿಸುವ ಈ ಸ್ತೋತ್ರ ದಿಂದ ದುಷ್ಟಶಕ್ತಿಗಳು ನಿಮ್ಮ ಮನೆಯ ಮೇಲೆ ಪ್ರಭಾವ ಬೀರುವುದಿಲ್ಲ ಹಾಗೂ ದೈವಬಲ ಹೆಚ್ಚಾಗುತ್ತದೆ.
ವಿಷ್ಣು ದೇವರಿಗೆ ಸಂಬಂಧಪಟ್ಟ ದೇವಸ್ಥಾನದಲ್ಲಿ ಮೊಸರಿನಿಂದ ಮಾಡಿರುವಂತಹ ಪ್ರಸಾದವನ್ನು ನಾಲ್ಕು ಜನಕ್ಕೆ ಹಂಚ ಬೇಕಾಗುತ್ತದೆ. ವಿಷ್ಣುವಿಗೆ ಸಂಬಂಧಪಟ್ಟ ದೇವಸ್ಥಾನವೆಂದರೆ ಉದಾಹರಣೆಗೆ ಶ್ರೀರಾಮನ ದೇವಸ್ಥಾನ, ಶ್ರೀ ಕೃಷ್ಣನ ದೇವಸ್ಥಾನ, ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನ, ನರಸಿಂಹ ಸ್ವಾಮಿ ದೇವಸ್ಥಾನ ದಲ್ಲಿ ಮೊಸರಿನಿಂದ ಮಾಡಿರುವಂತಹ ಪ್ರಸಾದವನ್ನು ನಾಲ್ಕು ಜನರಿಗೆ ಹಂಚಿ ಬರಬೇಕು. ಈ ಚಿಕ್ಕ ಕೆಲಸವನ್ನು ಮುಂಜಾನೆ ಮಾಡುವುದರಿಂದ ಶತ್ರುಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ.
ಮನೆಯಲ್ಲಿ ಕನಕ ದುರ್ಗಾದೇವಿಯು ಸಿಂಹದ ಮೇಲೆ ಕುಳಿತಿರುವಂತಹ ಚಿತ್ರಪಟಕ್ಕೆ ಪ್ರತಿನಿತ್ಯ ಸ್ಪರ್ಶಿಸಿ ನಮಸ್ಕಾರ ಮಾಡಿದರೆ ಶತ್ರುಗಳ ಕಾಟ ತಪ್ಪುತ್ತದೆ. ಪ್ರತಿನಿತ್ಯ ಮನೆಯಿಂದ ಹೊರಗಡೆ ಹೋಗಬೇಕಾದರೆ ಕನಕ ದುರ್ಗಾದೇವಿ ಚಿತ್ರಪಟಕ್ಕೆ ನಮಸ್ಕಾರ ಮಾಡಿ ಹೋಗಿದರೆ ನಿಮ್ಮ ಎಲ್ಲಾ ಕೆಲಸಗಳು ಸುಗಮವಾಗಿ ಸಾಗುತ್ತದೆ ಹಾಗು ವಿಶೇಷವಾದ ಫಲ ಪ್ರಾಪ್ತಿಯಾಗುತ್ತದೆ.
ಮನೆಯಲ್ಲಿ ಶತ್ರುಗಳ ಕಾಟ ಹೆಚ್ಚಾಗಿದ್ದರೆ ಅಥವಾ ಮಾಟ-ಮಂತ್ರ ಹೆಚ್ಚಾಗಿದ್ದರೆ ಎಳ್ಳೆಣ್ಣೆಯನ್ನು ಹಾಕಿ ದೀಪಾರಾಧನೆಯನ್ನು ಮಾಡಬೇಕು. ಎಳ್ಳೆಣ್ಣೆಯ ಜೊತೆಗೆ ನಾಲ್ಕು ಹನಿಯಷ್ಟು ಬೇವಿನ ಎಣ್ಣೆಯನ್ನು ಹಾಕಿ ದೀಪಾರಾಧನೆ ಮಾಡಬೇಕು. ಈ ರೀತಿ ಮಾಡುವುದರಿಂದ ದುಷ್ಟಶಕ್ತಿ ದೂರವಾಗಿ ದೈವಶಕ್ತಿ ಹೆಚ್ಚಾಗುತ್ತದೆ.
