ಕರ್ಮ ಮತ್ತು ದೇವರು
ಕರ್ಮಕ್ಕೂ ದೇವರಿಗೂ ಏನು ಸಂಬಂಧ ? ಕರ್ಮಕ್ಕೆ ತಕ್ಕಫಲವೆಂದಾದರೆ , ದೇವರ ಅಗತ್ಯವಿಲ್ಲವೆಂದು ಕೆಲವು ದರ್ಶನಗಳು ಹೇಳುತ್ತವೆ(ಮೀಮಾಂಸ) .
ಕರ್ಮಫಲವನ್ನು ಕೊಡಲು ಈಶ್ವರನು ಬೇಕೆಂದು ಕೆಲವರು ಹೇಳುತ್ತಾರೆ.
ಇದ್ದರೂ ಅವನಿಗೆ (ದೇವನಿಗೆ ಕರ್ಮಫಲವನ್ನು ತೆಗೆದು ಹಾಕಲು ) ಸ್ವಾತಂತ್ರ್ಯವಿಲ್ಲವೆಂದೂ -ಜೀವರಿಗೆ ಅವರವರ ಕರ್ಮದಂತೆಯೇ ಅವರವರ ಜನ್ಮ ಕೊಡಬೇಕಾಗುವುದಲ್ಲಾ ?.
ಕರ್ಮ ಜಡ (ಅಚೇತನ-ತಾರ್ಕಿಕವಾಗಿ) -ಅದನ್ನು ಪ್ರವರ್ತಿಸಲು (ದೇವರು) -ಚೇತನ ಬೇಕು . ಅದರಿಂದ ಬಿಡುಗಡೆ ಹೊಂದಲೂ ಅವನ ಅನುಗ್ರಹ ಬೇಕೆಂದು ಭಕ್ತಿಪಂಥ ಹೇಳುತ್ತದೆ. ಹಾಗೆ ಕೆಲವರಿಗೆ ಅನುಗ್ರಹ ಮಾಡಿದರೆ ದೇವನಿಗೆ ಪಕ್ಷಪಾತದ ಬರುವುದಲ್ಲಾ ? -ಎಂದು ಪ್ರತಿ ವಾದ .
ಕರ್ಮ ಫಲವನ್ನು ಅನುಭವಿಸಿಯೇ ತೀರಿಸಬೇಕೆಂದು ಒಂದು ವಾದ ; ಪುಣ್ಯದಿಂದ ಪಾಪ ಕರ್ಮ ಬಿಡುಗಡೆಯಾಗುದೆಂದು ಮತ್ತೊಂದು ವಾದ ಭಕ್ತಿಮಾರ್ಗದಿಂದ ಆಗಾಮಿ ಕರ್ಮವನ್ನು ತಡೆಗಟ್ಟಬಹುದು -ಆದರೆ ಪ್ರಾರಬ್ಧವನ್ನು ಅನುಭವಿಸಿಯೇ ತೀರಬೇಕೆಂದು ಕೆಲವರು ಹೇಳುವರು .
ಸತ್ಕರ್ಮದಿಂದ ಪುಣ್ಯ , ದುಷ್ಕರ್ಮದಿಂದ ಪಾಪ ಎಂದರೆ , ಸತ್ಕರ್ಮ -ದುಷ್ಕರ್ಮ ಎಂದು ನಿರ್ಧರಿಸುವವರು ಯಾರು ? ಅದಕ್ಕೆ ಉತ್ತರ -ವೇದ ! ಆದರೆ ಅದರಲ್ಲಿಲ್ಲದ ವಿಚಾರಗಳಿಗೆ ಫಲ ನಿರ್ಣಯ ಹೇಗೆ ? ಅದಕ್ಕೇನು ಉತ್ತರ ?
ಮಹಾಭಾರತದಲ್ಲಿ ಸರಳವಾಗಿ, ||ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ ||ಎಂದಿದೆ.
ಮೀಮಾಂಸಕರು ವೈದಿಕ (ವೇದದಲ್ಲಿ ವಿಧಿಸಿದ) ಕರ್ಮಗಳಿಗೆ ಮಾತ್ರಾ ಪುಣ್ಯವೆಂದು ಹೇಳುತ್ತಾರೆ -ಅದೇ ಯಜ್ಞ, ಯಾಗ ಇತ್ಯಾದಿ.
ಅದರೆ ಅದೇ ವೇದಾಂತಿಗಳು ,ಅದರಿಂದ ಸಿಗುವುದು ಅಶಾಶ್ವತ ಫಲ (ಸ್ವರ್ಗಫಲವನ್ನು ಕೊಟ್ಟರೂ-ಆ ಫಲ ತೀರಿದ ನಂತರ ಪುನಃ ಜನ್ಮವೆತ್ತಬೇಕು); ಅಶಾಶ್ವತ ಫಲ ಕೊಡುವುದರಿಂದ ಅವು ಮುಖ್ಯವಲ್ಲ ಎನ್ನುತ್ತಾರೆ .
ಆದ್ದರಿಂದ ಜ್ಞಾನಮಾರ್ಗವೇ ಮುಖ್ಯ, ಅದಾದರೆ -ಜ್ಞಾನವಾದರೆ ಎಲ್ಲಾ ಕರ್ಮದಿಂದ ಬಿಡುಗಡೆ ಎನ್ನುತ್ತಾರೆ.
ಮೀಮಾಂಸಕರು ಕರ್ಮವು -ನಿತ್ಯ , ನೈಮಿತ್ತಿಕ , ಕಾಮ್ಯ , ಪ್ರಾಯಶ್ಚಿತ ಎಂದು ನಾಲ್ಕು ಬಗೆ (‘ನಿಷಿದ್ಧ’ವೂ -ಮಾಡಬಾರದ್ದು ಸೇರಿದರೆ ಐದು ಬಗೆ) . ಎನ್ನುತ್ತಾರೆ. ವೇದಾಂತಿಗಳು ‘ಈಶ್ವರಾರ್ಪಣ ಬುದ್ಧಿ’ಯಿಂದ ಮಾಡಿದ ಕರ್ಮಗಳೆಲ್ಲಾ ನಿತ್ಯಕರ್ಮದಂತೆ ಎಂದಿದ್ದಾರೆ.