ಮಂತ್ರ ಅಂದ್ರೆ ಏನು? ಮಂತ್ರ ನಿಜವಾಗಲು ಕೆಲಸ ಮಾಡುತ್ತಾ? ಮಂತ್ರದ ಮಹತ್ವವೇನು?
Index of Important Points
ಮಂತ್ರ ಅಂದ್ರೆ ಏನು ? ಇದು ಕೆಲ್ಸ ಮಾಡುತ್ತಾ, ಇದ್ರಲ್ಲಿ ಎಷ್ಟು ವಿಧ, ಇಡೀ ಮಹತ್ವ ಏನು? ಅಂತ ತಿಲ್ಕೊಳೋಣ ಬನ್ನಿ.
ಈ ಬ್ರಹ್ಮಾಂಡವು ದೇವತೆಗಳ ಅಥವಾ ದೈವದ ನಿಯಂತ್ರಣದಲ್ಲಿ ಇರುವುದು ಭಗವಂತ ಇಡಿ ಪ್ರಪಂಚವನ್ನು ತನ್ನ ಹಿಡಿತದಲ್ಲಿಟ್ಟುಕೊಂಡು ಒಂದೊಂದು ಕಾರ್ಯವನ್ನು ಗ್ರಹ , ದೇವ ಅಥವಾ ಆಯಾ ಶಕ್ತಿಗಳಿಗೆ ನೇಮಿಸಿರುವನು ಆಯಾ ಕಾರ್ಯಗಳಿಗೆ ನೇಮಕವಾಗಿರುವ ಆಯಾ ದೇವತೆಗಳು ಸಕಾಲದಲ್ಲಿ ಆ ವ್ಯವಸ್ಥೆಯನ್ನು ನಿಯಂತ್ರಿಸುವರು ಉದಾ : ಇಂದ್ರ ಮಳೆಯು ಸಕಾಲದಲ್ಲಿ ಆಗುವಂತೆ ಅಥವಾ ಆಗದಂತೆ ನೋಡಿಕೊಳ್ಳುವನು , ಅಗ್ನಿಯು ಶುಭವನ್ನು ಅಥವಾ ಅವನಿಂದ ಅನುಭವನ್ನು ಉಂಟು ಮಾಡುವ ಕಾರ್ಯ ಅಂದರೆ ಯಜ್ಞದ ಅಗ್ನಿ ~ ಚೀತಾಗ್ನಿ ಹೀಗೆ ಪ್ರತಿಯೊಬ್ಬರು ಸಹ ಅವರವರ ಕಾರ್ಯವನ್ನು ಚಾಚು ತಪ್ಪದೆ ಮಾಡುವರು ಮನುಷ್ಯನು ಯಾವ ಕಾರ್ಯ ಸಾಧನೆ ಆಗಬೇಕಾಗಿದೆಯೊ ಅಥವಾ ಅಪೇಕ್ಷೆ ಇದೆಯೊ ಆ ದೇವತೆಯನ್ನು ಬೇಡುವ ಮಾರ್ಗವೆ ಮಂತ್ರ
ಮನಸಾತ್ ತ್ರಾಯತೆಯಸ್ಮಾತ್ ಸ್ಮಾನ್ಮೋಂತ್ರಃ ಪ್ರಕೀರ್ತತಃ |
ಮನಸ್ಸಿಗೆ ಮನನವಾದದು ತ್ರಕಾದಿಂದ ರಕ್ಷಿಸುವುದು , ಯಾವುದೇ ವಿಚಾರದಿಂದ ನಮ್ಮೆಲ್ಲ ಕಾರ್ಯಗಳು ಪೂರ್ಣಗೊಳ್ಳುವುದೆ ಅದೇ ಮಂತ್ರ .
ಶಬ್ಧ ಅಥವಾ ಧ್ವನಿಯು ಮಂತ್ರವೆನಿಸುವುದು ಯಾವುದೇ ಸಾಧನೆಗಳಿಗೆ ಮೊದಲು ಅಗತ್ಯವಾದದು ಶಬ್ದವು ಅಕ್ಷರಗಳ ಸಂಯೋಜನೆಯಿಂದ ಶಬ್ದಗಳು ಉಂಟಾಗುತ್ತದೆ.
ಉದಾಹರಣೆಗೆ ಓಂ ಜಾಗಟೆ ಅಥವಾ ಗಂಟೆಯನ್ನು ಬಾರಿಸಿದಾಗ ಉತ್ಪನ್ನವಾಗುವ ತರಂಗ ಓಂ ಎಂಬ ವರ್ಣ ಅಥವಾ ಅಕ್ಷರದಿಂದ ನಿಲ್ಲುತ್ತದೆ ಎಂದ ಮೇಲೆ ಮಂತ್ರದ ಉಗಮವು ಶಬ್ದದಿಂದಲೆ ಆಗುವುದು , ಶಬ್ದ ಮತ್ತು ಅದರ ಅರ್ಥವೆ ” ಶಿವ+ಶಕ್ತಿ” ಸಂಬಂಧವೆನ್ನಬಹುದು .
ಮಂತ್ರವನ್ನು ಅದರ ಅರ್ಥವನ್ನು ತಿಳಿದ ಯಾವುದೆ ಜೀವಿ ಬೇದರಹಿತವಾಗಿ ಜಪಿಸಬಹುದು ಅವನ ಸಾಮರ್ಥ್ಯಕ್ಕೆ ಅನುಗುಣವಾಗಿ ಆದರೆ ಯಾವ ಕಾಮ್ಯದಿಂದ ಯಾವ ಮಂತ್ರವನ್ನು ಯಾವಾಗ , ಹೇಗೆ ಮತ್ತು ಎಷ್ಟು ಸಂಖ್ಯೆಯಲ್ಲಿ ಜಪಿಸಬೇಕು ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು ಇದನ್ನು ಅರ್ಥೈಸಿಕೊಳ್ಳುವ ಸುಲಭ ಮಾರ್ಗವೆ ಗುರು ಆದಕಾರಣವೆ ಗುರುಮುಖೇನ ದೀಕ್ಷೆಯನ್ನು ಪಡೆಯಬೇಕು ಎಂದು ಶಾಸ್ತ್ರವು ಸ್ಪಷ್ಟಪಡಿಸುತ್ತದೆ ಅಲ್ಲದೆ ನಿಮಗೆ ದೀಕ್ಷೆಯನ್ನು ನೀಡುವ ಗುರು ಆ ಮಂತ್ರದ ಸಾಧನೆಯಲ್ಲಿ ಹಲವಾರು ವರ್ಷ ತೊಡಗಿ ಮಂತ್ರದ ಸಿದ್ದಿಯನ್ನು ಪಡೆದ ಕಾರಣ ಅಂತವರಿಂದ ನೀವು ದೀಕ್ಷಿತರಾದಾಗ ಸಾಧನೆಯಲ್ಲಿ ತೊಡಕುಗಳು ಬಂದರು ಎದುರಿಸುವ ಬಲವು ಗುರುವಿನ ಭಕ್ತಿಯಿಂದ ಸಿಗುವುದು ,
ಇಲ್ಲಿ ಎಲ್ಲಾ ಮಂತ್ರಿಗಳಿಗೂ ದೀಕ್ಷೆ ಪಡೆಯಬೇಕು ಎಂದು ಇಲ್ಲ ಕೆಲವನ್ನು ದೀಕ್ಷೆ ಪಡೆಯದೆ ಪಠಿಸಬಹುದು ಉದಾ : ಅಷ್ಟೋತ್ತರ, ಅಷ್ಟಕ, ಮತ್ತು ಸ್ತ್ರೋತ್ರಗಳು
ಮಂತ್ರಗಳಲ್ಲಿಯೂ ಲಿಂಗಬೇದ ಇದೆ ಮಂತ್ರದ ಕೊನೆಗೆ ಸ್ವಾಹಾ ಎಂದರೆ ಅದು ಸ್ತ್ರೀಲಿಂಗ ಮಂತ್ರ
ಮತ್ತು ನಮಃ ಎಂದರೆ ನಪುಂಸಕ
ಹೂಂ ಪಟ್ ಎಂದರೆ ಪುರುಷಲಿಂಗಿ ಮಂತ್ರಗಳು ಎಂದು ಗುರುತಿಸಬೇಕು
ಇದರ ಜೊತೆಗೆ ಇವುಗಳನ್ನು ಇನ್ನು ಮುಖ್ಯವಾಗಿ 3 ರೀತಿಯಲ್ಲಿ ವಿಂಗಡಿಸಬಹುದು
ಸಾತ್ವಿಕ , ರಾಜಸಿಕ , ಮತ್ತು ತಾಮಸಿಕ
ಸಾತ್ವಿಕ ಎಂದರೆ ನಮ್ಮ ಲೌಕಿಕ ಮತ್ತು ಅಲೌಕಿಕ ಎರಡು ಸಂದರ್ಭದಲ್ಲಿ ಉಪಯೋಗ ಆಗುವು ಉದಾ : ಗಾಯತ್ರಿ , ಮಾಹಾಮೃತ್ಯುಂಜಯ ಇತ್ಯಾದಿ
ರಾಜಸಿ ಎಂದರೆ : ನಿರ್ದಿಷ್ಟವಾಗಿ ಲೌಕಿಕ ಸುಖವನ್ನು ನೀಡುವ ಮಂತ್ರಗಳು ವಶೀಕರಣ ಇತ್ಯಾದಿ
ತಾಮಸಿಕ ಎಂದರೆ : ಮತ್ತೊಬ್ಬರಿಗೆ ಕೇಡನ್ನು ಉಂಟುಮಾಡುವ ಮಂತ್ರಗಳು
ಇವುಗಳಲ್ಲಿಯೂ 6 ವಿಧಗಳು ಉಂಟು
ಶಾಂತಿ ಕರ್ಮ , ವಶೀಕರಣ , ಸ್ತಂಭನ, ವಿದ್ವೇಶನ , ಉಚ್ಚಾಟನ , ಮಾರಣ ಎಂಬುದಾಗಿ ಮುಖ್ಯತಹ ಹೇಳಬಹುದು
ಇನ್ನು ಮಂತ್ರಗಳಿಂದ ದೇವತೆಗಳು ಹೇಗೆ ಪ್ರಸನ್ನರಾಗುವರು ಎಂದರೆ ದೇವತೆಗಳು ಮಂತ್ರದ ಅಧೀನವಾಗಿರುವರು
” ದೈವಾದಿನಂ ಜಗತ್ಸರ್ವಂ ಮಂತ್ರಾದೀನಂತು ದೈವತಾಂ ”
ಮಂತ್ರವನ್ನು ಅನ್ವರ್ಥ ಬೀಡದೆ ಜಪಿಸಿದರೆ ಮಾತ್ರ ಫಲ ಸಿಗುವುದು ಅದರಲ್ಲಿ ನಿರಂತರತೆ ಅಗತ್ಯ ಉದಾ : ಒಂದು ಕಲ್ಲಿನ ಮೇಲೆ ನಿರಂತರ ಒಂದೊಂದು ಹನಿ ನೀರು ಬಿಳುತ್ತಿದ್ದರೆ ಅದರಲ್ಲಿ ರಂದ್ರವಾದಂತೆ ನಾವು ಅನ್ವರ್ಥ ಮಂತ್ರ ಜಪವನ್ನು ಮಾಡಿದಾಗ ಎಷ್ಟೆ ಬಲಿಷ್ಟ ಕರ್ಮವು ಕೂಡ ನಾಶವಾಗಿ ಭಗವಂತನ ಬಳಿ ನಮ್ಮ ಕೋರಿಕೆ ಹೋಗುವುದು
ಮಂತ್ರದ ಪ್ರಬಾವದಿಂದಲೆ ವಿಶ್ವಾಮಿತ್ರರು ಬ್ರಹ್ಮರ್ಷಿಗಳಾದರು ಈ ಮಂತ್ರದ ಶಕ್ತಿಯಿಂದಲೆ ಜಯಮೇಜ ಎಂಬ ರಾಜ ಹಿಂದೆ ಸರ್ಪಯಾಗವನ್ನು ಮಾಡಿ ಅದರಲ್ಲಿ ತಕ್ಷಕ ಮತ್ತು ಇಂದ್ರನನ್ನು ಸಹ ಹೋಮಕುಂಡಕ್ಕೆ ಬಿಳಲು ಮಂಟಪಕ್ಕೆ ಸಮ್ಮೊಹಿಸಿ ಕರೆಸಿದ್ದು ಇದೇ ಮಂತ್ರದ ಪ್ರಭಾವದಿಂದ .
ಸರ್ವೋಚ್ಚ ಸಂತೋಷವನ್ನು ಪಡೆದುಕೊಳ್ಳಲು ಯಾವ ಮಂತ್ರಗಳನ್ನು ಜಪಿಸಬೇಕು?
🌷 ಹಿಂದೂ ಧರ್ಮದ ದೇವರುಗಳನ್ನು ಒಲಿಸಿಕೊಳ್ಳಲು ಹಾಗೂ ಪ್ರಾರ್ಥಿಸಲು ಮಂತ್ರಗಳು ಪ್ರಾಮುಖ್ಯತೆ ವಹಿಸುತ್ತವೆ ಎಂಬುದು ಹಲವರ ನಂಬಿಕೆ. ಈ ಹಿನ್ನೆಲೆ ಮಂತ್ರಗಳು ಮನುಷ್ಯನ ಜೀವನದಲ್ಲಿ ಉತ್ತಮ ಬದಲಾವಣೆ ತರಲು, ಮಂತ್ರಗಳು ಎಲ್ಲಾ ವೇದ ಗ್ರಂಥಗಳು ಮತ್ತು ಪುಸ್ತಕಗಳ ಸಂಪೂರ್ಣ ಪಠ್ಯಗಳ ಆಧಾರವಾಗಿವೆ ಮತ್ತು ವ್ಯಕ್ತಿಯಲ್ಲಿ ಆಧ್ಯಾತ್ಮಿಕತೆಯ ಭಾವನೆಗಳನ್ನು ಪ್ರಚೋದಿಸುವ ಪ್ರಬಲ ಮಾಧ್ಯಮವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ ಋಷಿಮುನಿಗಳು, ಜ್ಯೋತಿಷಿಗಳು ಮತ್ತು ಸಾಮಾನ್ಯ ಜನರು ಧಾರ್ಮಿಕ ಮತ್ತು ಶುಭ ಆಚರಣೆಗಳಿಗಾಗಿ ಮತ್ತು ಧ್ಯಾನ ಉದ್ದೇಶಕ್ಕಾಗಿ ವಿವಿಧ ಪವಿತ್ರ ಮಂತ್ರಗಳನ್ನು ಜಪಿಸುತ್ತಾರೆ.
🌷 ಈ ಪೈಕಿ, ಕೆಲವು ಶಕ್ತಿಶಾಲಿ ಮಂತ್ರಗಳ ಜೊತೆಗೆ ಅವುಗಳ ಪ್ರಯೋಜನಗಳನ್ನೂ ಈ ಕೆಳಗೆ ಉಲ್ಲೇಖಿಸಲಾಗಿದೆ.
🌷 ಓಂಕಾರ ಮಂತ್ರ : ಹಿಂದೂ ಧರ್ಮದಲ್ಲಿ, ಈ ಏಕ ಉಚ್ಚಾರ ಮಂತ್ರ (ಓಂ) ಎಲ್ಲಾ ವೇದ, ಮಂತ್ರಗಳು, ಆಚರಣೆಗಳು ಮತ್ತು ಎಲ್ಲದರ ಮೂಲತತ್ವವಾಗಿದೆ. ಇದು ಹಿಂದೂ ಧರ್ಮ, ಜೈನ ಮತ್ತು ಬೌದ್ಧ ಧರ್ಮದ ಜನರಿಂದ ಅಂಗೀಕರಿಸಲ್ಪಟ್ಟ ಮತ್ತು ಒಪ್ಪಿಕೊಂಡ ಒಂದು ವಿಜ್ಞಾನವೇ ಆಗಿದೆ.
🌷 ಇದನ್ನು ಧ್ಯಾನ ಅಥವಾ ಯೋಗದ ಮಹತ್ವದ ಭಾಗವಾಗಿ ಸಹ ಅಳವಡಿಸಿಕೊಳ್ಳಲಾಗಿದೆ. ಈ ಮಂತ್ರವನ್ನು ಜಪಿಸುವ ಜನರು ಪ್ರಶಾಂತ, ಮತ್ತು ಶಾಂತ ಭಾವನೆ ಹೊಂದುತ್ತಾರೆ. ಇದು ಏಕಾಗ್ರತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ರಕ್ತದೊತ್ತಡ, ಹೃದಯದ ತೊಂದರೆಗಳಂತಹ ದೇಹದ ವಿವಿಧ ಕಾಯಿಲೆಗಳಿಗೆ ಸಹಾಯ ಮಾಡುತ್ತದೆ. ಜತೆಗೆ ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ, ದೇಹದೊಳಗೆ ಸೇರಿಕೊಂಡಿರುವ ವಿಷವನ್ನು ತೆಗೆದುಹಾಕುತ್ತದೆ.
ಮಂತ್ರ : ಓಂ
🌷 ಗಾಯತ್ರಿ ಮಂತ್ರ : ಈ ಮಂತ್ರವು ಧಾರ್ಮಿಕ ಮಹತ್ವವನ್ನು ಹೊಂದಿದೆ ಮತ್ತು ದೈವಿಕ ಮತ್ತು ಪ್ರಾಚೀನವಾಗಿದೆ. ಗಾಯತ್ರಿ ಮಾತೆ ಎಲ್ಲಾ ವೇದಗಳ ತಾಯಿ, ವೇದಮಾತಾ ಎಂದು ಕರೆಯುತ್ತಾರೆ ಮತ್ತು ಎಲ್ಲಾ ಜ್ಞಾನದ ಮೂಲವೆಂದು ನಂಬಲಾಗಿದೆ. ಅವಳು ಸಾವಿತ್ರಿ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತಾಳೆ ಮತ್ತು ಸಾಮಾನ್ಯವಾಗಿ ವೇದಗಳ ಪ್ರಕಾರ ಸೌರ ದೇವತೆಯಾದ ಸಾವಿತ್ರನೊಂದಿಗೆ ಸಂಬಂಧ ಹೊಂದಿದ್ದಾಳೆ.
🌷 ಬೆಳಗ್ಗೆ ಮತ್ತು ಸಂಜೆ ಈ ಮಂತ್ರವನ್ನು ಕನಿಷ್ಠ 3 ಬಾರಿ ಜಪಿಸುವುದರಿಂದ ಬುದ್ಧಿವಂತಿಕೆ ಮತ್ತು ಉತ್ತಮ ಜ್ಞಾನವಿರುವ ವ್ಯಕ್ತಿಗೆ ಆಧ್ಯಾತ್ಮಿಕ ಮತ್ತು ದೈಹಿಕ ಲಾಭಗಳು ದೊರೆಯುತ್ತವೆ.
ಮಂತ್ರ : ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿಃ ಧಿಯೋಯೋನಃ ಪ್ರಚೋದಯಾತ್
🌷 ಮೃತ್ಯುಂಜಯ ಮಂತ್ರ: ಶಿವನ ಮಂತ್ರ ಎಂದೂ ಕರೆಯಲ್ಪಡುವ ಮೃತ್ಯುಂಜಯ ಮಂತ್ರವು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ಮತ್ತು ದೈವಿಕ ಮಂತ್ರವಾಗಿದೆ. ಇದನ್ನು ತ್ರಯಂಬಕಂ ಮಂತ್ರ ಮತ್ತು ಮೋಕ್ಷ ಮಂತ್ರ ಎಂದೂ ಕರೆಯುತ್ತಾರೆ. ಇದು ಆಧ್ಯಾತ್ಮಿಕ ಪ್ರಯೋಜನಗಳಿಗಾಗಿ ಮತ್ತು ಮರಣಾನಂತರದ ಜೀವನದಲ್ಲಿ ಮೋಕ್ಷವನ್ನು ಪಡೆಯುವ ಮಂತ್ರವಾಗಿದೆ.
🌷 ಈ ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಉತ್ತಮ ಆರೋಗ್ಯ, ಶಾಂತಿ, ಸಂಪತ್ತು, ಸಮೃದ್ಧಿ ಮತ್ತು ದೀರ್ಘಾಯುಷ್ಯ ಪಡೆದುಕೊಳ್ಳಲು ವ್ಯಕ್ತಿಗೆ ಪ್ರಯೋಜನವಾಗುತ್ತದೆ. ಇದು ವ್ಯಕ್ತಿಯಲ್ಲಿ ಸಕಾರಾತ್ಮಕ ಕಂಪನಗಳನ್ನು ಉಂಟುಮಾಡುತ್ತದೆ ಮತ್ತು ನೈಸರ್ಗಿಕ ಮತ್ತು ಅಪರಿಚಿತ ವಿಪತ್ತುಗಳಿಂದ ರಕ್ಷಿಸುತ್ತದೆ.
ಮಂತ್ರ : ॐ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ |
ಉರ್ವಾರುಕಮಿವ ಬಂಧನಾನ್ ಮೃತ್ಯೋರ್ಮುಕ್ಷೀಯಮಾಮೃತಾತ್ ||
🌷 ಗಣೇಶ ಮಂತ್ರ: ಇದು ಗಣೇಶನಿಗೆ ಸಂಬಂಧಿಸಿದ ಮಂತ್ರವಾಗಿದೆ ಮತ್ತು ವ್ಯಕ್ತಿಯ ಜೀವನದಿಂದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವ ಸಾಮರ್ಥ್ಯಕ್ಕೆ ಇದು ಹೆಸರುವಾಸಿಯಾಗಿದೆ. ಶುಭ ಚಟುವಟಿಕೆ ನಡೆದಾಗಲೆಲ್ಲಾ ಗಣೇಶ ಮಂತ್ರವು ಮೊದಲ ಮಂತ್ರವಾಗಿದ್ದು, ಯಾವುದೇ ಅಡೆತಡೆಗಳು ಅಥವಾ ಅಡೆತಡೆಗಳಿಲ್ಲದೆ ಚಟುವಟಿಕೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಆರಂಭದಲ್ಲಿ ಪಠಿಸಲಾಗುತ್ತದೆ.
🌷 ಇದು ಯಶಸ್ಸು, ಸಮೃದ್ಧಿ ಮತ್ತು ಸಂಪತ್ತಿನ ಮಂತ್ರವಾಗಿದೆ. ಮಂತ್ರದ ನಿಯಮಿತ ಪಠಣವು ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ, ಏಕಾಗ್ರತೆಯನ್ನು ಸುಧಾರಿಸುತ್ತದೆ ಮತ್ತು ಚಯಾಪಚಯ ಕ್ರಿಯೆಗೆ ಒಳ್ಳೆಯದು. ಇದು ಒಬ್ಬ ವ್ಯಕ್ತಿಯನ್ನು ತಮ್ಮ ಶತ್ರುಗಳಿಂದ ಮತ್ತು ಜೀವನದ ಇತರ ಸಮಸ್ಯೆಗಳಿಂದ ರಕ್ಷಿಸುತ್ತದೆ.
ಮಂತ್ರ : ಓಂ ಗಂ ಗಣಪತಯೇ ನಮಃ
🌷 ಮಹಾಲಕ್ಷ್ಮೀ ಮಂತ್ರ: ಎಲ್ಲಾ ಸಂಪತ್ತು, ಸಂಪತ್ತು, ಆರೋಗ್ಯ ಮತ್ತು ಸಮೃದ್ಧಿಯ ದೇವತೆ, ಲಕ್ಷ್ಮೀ ದೇವತೆ ಲಕ್ಷ್ಮಿ ಮಂತ್ರದೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಮಂತ್ರವನ್ನು ಪಠಿಸುವುದು ಎಂದರೆ ನಿಮ್ಮ ಗುರಿಯನ್ನು ತಿಳಿದುಕೊಳ್ಳುವುದು ಮತ್ತು ಅದನ್ನು ಸಾಧಿಸುವುದು. ಇದು ಆರ್ಥಿಕ ಸ್ಥಿರತೆಯನ್ನು ಗಳಿಸುವುದು ಮಾತ್ರವಲ್ಲ, ಬುದ್ಧಿವಂತಿಕೆ ಮತ್ತು ತಿಳುವಳಿಕೆಗಾಗಿ ದೇವಿಯ ಆಶೀರ್ವಾದವನ್ನು ಪಡೆಯುವುದು.
🌷 ಮಂತ್ರವನ್ನು ನಿಯಮಿತವಾಗಿ ಜಪಿಸುವುದರಿಂದ ಆರೋಗ್ಯ, ಸಂಪತ್ತು, ಹಣಕಾಸು ಮತ್ತು ಸಂಬಂಧಗಳು ಹೇರಳವಾಗಿ ತರುತ್ತವೆ ಮತ್ತು ಜೀವನದಲ್ಲಿ ಒಬ್ಬರ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ.
ಮಂತ್ರ : ಓಂ ಸರ್ವಾಬಾಧಾ ವಿನಿರ್ಮುಕ್ತೋ ಧನಧಾನ್ಯ ಸಮನ್ವಿತಾ |
ಮನುಷ್ಯೋ ಮತ್ಪ್ರಸಾದೇನ ಭವಿಷ್ಯತಿ ನ ಸನ್ಶಯಃ ಓಂ ||
🌷 ಹೀಗಾಗಿ, ಈ ಎಲ್ಲಾ ಶಕ್ತಿಯುತ ಮಂತ್ರಗಳು ಹಾಗೂ ಇದರ ಜೊತೆಗೆ ದುರ್ಗಾ ಮಂತ್ರ, ಕುಬೇರ ಮಂತ್ರ, ಸರಸ್ವತಿ ಮಂತ್ರ ಮುಂತಾದ ಇತರ ಮಹತ್ವದ ಮಂತ್ರಗಳು ನಿಯಮಿತವಾಗಿ ಜಪ ಮಾಡಿದರೆ ಜನರಿಗೆ ಪ್ರಯೋಜನಕಾರಿಯಾಗುತ್ತದೆ. ಈ ಮಂತ್ರಗಳು ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ, ಪ್ರೀತಿ ಮತ್ತು ಸಂತೋಷ, ಶಾಂತಿ ಮತ್ತು ಸಮೃದ್ಧಿ, ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ಸಾಧಿಸಲು, ಒಬ್ಬರ ಅಸ್ತಿತ್ವದ ಅಂತಿಮ ಸತ್ಯವನ್ನು ಪಡೆಯಲು ಮತ್ತು ಸರ್ವಶಕ್ತನೊಡನೆ ಒಂದಾಗಲು ಒಂದು ಮಾರ್ಗವಾಗಿದೆ.
🌷 ನಿಮ್ಮ ಇಂದ್ರಿಯಗಳನ್ನು ಶಾಂತಗೊಳಿಸುವ, ದೈವಿಕ ಕಂಪನಗಳನ್ನು ಅನುಭವಿಸುವ ಮತ್ತು ನಿಮ್ಮ ದೇಹ ಮತ್ತು ಆತ್ಮದ ಪ್ರತಿಯೊಂದು ಭಾಗವನ್ನು ಶುದ್ಧೀಕರಿಸುವ ಮೂಲವೂ ಈ ಮಂತ್ರಗಳು. ಆದ್ದರಿಂದ, ಪ್ರತಿ ಮಂತ್ರವನ್ನು ಜಪಿಸಿದರೆ ಆರೋಗ್ಯಕರ, ಸಂತೋಷ ಮತ್ತು ಯಶಸ್ವಿ ಜೀವನಕ್ಕಾಗಿ ಮಂತ್ರಗಳನ್ನು ಜಪಿಸಲು ಪ್ರಾರಂಭಿಸಿ!
ಶ್ರೀ ದುರ್ಗಾ ಸಪ್ತಶತಿಯಲ್ಲಿ ಬರುವ ಮಂತ್ರಗಳಲ್ಲಿ ಅತ್ಯಂತ ಶಕ್ತಿಯುತವಾದ ಮೂವತ್ತು ಸಿದ್ಧಿ ಮಂತ್ರಗಳು ಇರುವವು.
ಅವುಗಳೆಲ್ಲವನ್ನೂ ಸೇರಿದ್ದೇ ಸಪ್ತಶತಿ ಸಿದ್ಧಿ ಸಂಪುಟ
ಅವುಗಳನ್ನು ಒಂದೊದಾಗಿ ತಿಳಿದುಕೊಳ್ಳುವ.
॥ ಸಪ್ತಶತೀ ಸಿದ್ಧ ಸಂಪುಟಮನ್ತ್ರಾಃ ॥
1) ಸಾಮೂಹಿಕ ಕಲ್ಯಾಣಕ್ಕಾಗಿ
ದೇವ್ಯಾ ಯಯಾ ತತಮಿದಂ ಜಗದಾತ್ಮಶಕ್ತ್ಯಾ
ನಿಶ್ಶೇಷದೇವಗಣಶಕ್ತಿಸಮೂಹಮೂರ್ತ್ಯಾ ।
ತಾಮಂಬಿಕಾಮಖಿಲದೇವಮಹರ್ಷಿಪೂಜ್ಯಾಂ
ಭಕ್ತ್ಯಾ ನತಾಃ ಸ್ಮ ವಿದಧಾತು ಶುಭಾನಿ ಸಾ ನಃ ॥
2) ವಿಶ್ವದಲ್ಲಿ ಅಶುಭ, ಭಯನಾಶಕ್ಕಾಗಿ
ಯಸ್ಯಾಃ ಪ್ರಭಾವಮತುಲಂ ಭಗವಾನನ್ತೋ
ಬ್ರಹ್ಮ ಹರಶ್ಚ ನ ಹಿ ವಕ್ತುಮಲಂ ಬಲಂ ಚ ।
ಸಾ ಚಂಡಿಕಾಖಿಲಜಗತ್ಪರಿಪಾಲನಾಯ
ನಾಶಾಯ ಚಾಶುಭಭಯಸ್ಯ ಮತಿಂ ಕರೋತು ॥
3) ವಿಶ್ವದ ರಕ್ಷಣೆಗಾಗಿ
ಯಾ ಶ್ರೀಃ ಸ್ವಯಂ ಸುಕೃತಿನಾಂ ಭವನೇಷ್ವಲಕ್ಷ್ಮೀಃ
ಪಾಪಾತ್ಮನಾಂ ಕೃತಧಿಯಾಂ ಹೃದಯೇಷು ಬುದ್ಧಿಃ ।
ಶ್ರದ್ಧಾ ಸತಾಂ ಕುಲಜನಪ್ರಭವಸ್ಯ ಲಜ್ಜಾ
ತಾಂ ತ್ವಾಂ ನತಾಃ ಸ್ಮ ಪರಿಪಾಲಯ ದೇವಿ ವಿಶ್ವಮ್ ॥
4) ವಿಶ್ವದ ಅಭ್ಯುದಯಕ್ಕಾಗಿ
ವಿಶ್ವೇಶ್ವರಿ ತ್ವಂ ಪರಿಪಾಸಿ ವಿಶ್ವಂ
ವಿಶ್ವಾತ್ಮಿಕಾ ಧಾರಯಸೀತಿ ವಿಶ್ವಮ್ ।
ವಿಶ್ವೇಶವನ್ದ್ಯಾ ಭವತೀ ಭವನ್ತಿ
ವಿಶ್ವಾಶ್ರಯಾ ಯೇ ತ್ವಯಿ ಭಕ್ತಿನಮ್ರಾಃ ॥
5) ವಿಪತ್ತು ನಾಶಕ್ಕಾಗಿ
ದೇವಿ ಪ್ರಪನ್ನರ್ತಿಹರೇ ಪ್ರಸೀದ
ಪ್ರಸೀದ ಮಾತರ್ಜಗತೋಽಖಿಲಸ್ಯ ।
ಪ್ರಸೀದ ವಿಶ್ವೇಶ್ವರಿ ಪಾಹಿ ವಿಶ್ವಂ
ತ್ವಮೀಶ್ವರೀ ದೇವಿ ಚರಾಚರಸ್ಯ ॥
6) ವಿಶ್ವದ ಪಾಪ-ತಾಪ-ನಿವಾರಣಕ್ಕಾಗಿ
ದೇವಿ ಪ್ರಸೀದ ಪರಿಪಾಲಯ ನೋಽರಿಭೀತೇ-ರ್ನಿತ್ಯಂ ಯಥಾಸುರವಧಾದಧುನೈವ ಸದ್ಯಃ ।
ಪಾಪಾನಿ ಸರ್ವಜಗತಾಂ ಪ್ರಶಮಂ ನಯಾಶು
ಉತ್ಪಾತಪಾಕಜನಿತಾಂಶ್ಚ ಮಹೋಪಸರ್ಗಾನ್ ॥
7) ವಿಪತ್ತಿನಾಶಕ್ಕಾಗಿ
ಶರಣಾಗತದೀನಾರ್ತಪರಿತ್ರಾಣಪರಾಯಣೇ ।
ಸರ್ವಾಸ್ಯಾರ್ತಿಹರೇ ದೇವಿ ನಾರಾಯಣಿ ನಮೋಽಸ್ತು ತೇ ॥
8) ವಿಪತ್ತಿನಾಶ ಮತ್ತು ಶುಭ ಪ್ರಾಪ್ತವಾಗಲು
ಕರೋತು ಸಾ ನಃ ಶುಭಹೇತುರೀಶ್ವರೀ
ಶುಭಾನಿ ಭದ್ರಾಣ್ಯಭಿಹನ್ತು ಚಾಪದಃ ।
9) ಭಯನಾಶಕ್ಕಾಗಿ
ಕ) ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿಸಮನ್ವಿತೇ ।
ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಽಸ್ತು ತೇ ॥
ಖ) ಏತತ್ತೇ ವದನಂ ಸೌಮ್ಯಂ ಲೋಚನತ್ರಯಭೂಷಿತಂ ಪಾತು ನಃ ಸರ್ವಭೀತಿಭ್ಯಃ ಕಾತ್ಯಾಯನಿ ನಮೋಽಸ್ತು ತೇ ॥
ಗ) ಜ್ವಾಲಾಕರಾಲಮತ್ಯುಗ್ರಮಶೇಷಾಸುರಸೂದನಮ್ ।
ತ್ರಿಶೂಲಂ ಪಾತು ನೋ ಭೀತೇರ್ಭದ್ರಕಾಲಿ ನಮೋಽಸ್ತು ತೇ ॥
10) ಪಾಪನಾಶಕ್ಕಾಗಿ
ಹಿನಸ್ತಿ ದೈತ್ಯತೇಜಾಂಸಿ ಸ್ವನೇನಾಪೂರ್ಯ ಯಾ ಜಗತ್ ।
ಸಾ ಘಂಟಾ ಪಾತು ನೋ ದೇವಿ ಪಾಪೇಭ್ಯೋಽನಃ ಸುತಾನಿವ ॥
11) ರೋಗನಾಶಕ್ಕಾಗಿ
ರೋಗಾನಶೇಷಾನಪಹಂಸಿ ತುಷ್ಟಾ
ರುಷ್ಟಾ ತು ಕಾಮಾನ್ ಸಕಲಾನಭೀಷ್ಟಾನ್ ।
ತ್ವಾಮಾಶ್ರಿತಾನಾಂ ನ ವಿಪನ್ನರಾಣಾಂ
ತ್ವಾಮಾಶ್ರಿತಾ ಹ್ಯಾಶ್ರಯತಾಂ ಪ್ರಯಾನ್ತಿ ॥
12) ಮಹಾಮಾರೀನಾಶಕ್ಕೆ
ಜಯನ್ತೀ ಮಂಗಲಾ ಕಾಲೀ ಭದ್ರಕಾಲೀ ಕಪಾಲಿನೀ ।
ದುರ್ಗಾ ಕ್ಷಮಾ ಶಿವಾ ಧಾತ್ರೀ ಸ್ವಾಹಾ ಸ್ವಧಾ ನಮೋಽಸ್ತು ತೇ ॥
13) ಆರೋಗ್ಯ ಮತ್ತು ಸೌಭಾಗ್ಯ ಪ್ರಾಪ್ತಿಗಾಗಿ
ದೇಹಿಸೌಭಾಗ್ಯಮಾರೋಗ್ಯಂ ದೇಹಿ ಮೇ ಪರಮಂ ಸುಖಮ್ ।
ರುಪಂ ದೇಹಿ ಯಶೋ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ ॥
14) ಸುಲಕ್ಷಣಾ ಪತ್ನೀ ಪ್ರಾಪ್ತಿಗಾಗಿ
ಪತ್ನೀಂ ಮನೋರಮಾಂ ದೇಹಿ ಮನೋವೃತ್ತಾನುಸಾರಿಣೀಮ್ ।
ತಾರಿಣೀಂ ದುರ್ಗಸಂಸಾರ ಸಾಗರಸ್ಯ ಕುಲೋದ್ಭವಾಮ್ ॥
15) ಬಾಧಾಶಾಂತಿಗಾಗಿ
ಸರ್ವಾಬಾಧಾಪ್ರಶಮನಂ ತ್ರೈಲೋಕ್ಯಾಖಿಲೇಶ್ವರಿ ।
ಏವಮೇವ ತ್ವಯಾ ಕಾರ್ಯಮಸ್ಮದ್ವೈರಿವಿನಾಶನಮ್ ॥
16) ಸರ್ವವಿಧ ಅಭ್ಯುದಯಕ್ಕಾಗಿ
ತೇ ಸಮ್ಮತಾ ಜನಪದೇಷು ಧನಾನಿ ತೇಷಾಂ
ತೇಷಾಂ ಯಶಾಂಸಿ ನ ಚ ಸೀದತಿ ಧರ್ಮವರ್ಗಃ ।
ಧನ್ಯಾಸ್ತ ಏವ ನಿಭೃತಾತ್ಮಜಭೃತ್ಯದಾರಾ
ಯೇಷಾಂ ಸದಾಭ್ಯುದಯದಾ ಭವತೀ ಪ್ರಸನ್ನಾ ॥
17) ದಾರಿದ್ರ್ಯದುಃಖಾದಿನಾಶಕ್ಕಾಗಿ
ದುರ್ಗೇ ಸ್ಮೃತಾ ಹರಸಿ ಭೀತಿಮಶೇಷಜನ್ತೋಃ
ಸ್ವಸ್ಥೈಃ ಸ್ಮೃತಾ ಮತಿಮತೀವ ಶುಭಾಂ ದದಾಸಿ ।
ದಾರಿದ್ರ್ಯದುಃಖಭಯಹಾರಿಣಿ ಕಾ ತ್ವದನ್ಯಾ
ಸರ್ವೋಪಕಾರಕರಣಾಯ ಸದಾಽಽರ್ದ್ರಚಿತ್ತಾ ॥
18) ರಕ್ಷಣೆಗಾಗಿ
ಶೂಲೇನ ಪಾಹಿ ನೋ ದೇವಿ ಪಾಹಿ ಖಡ್ಗೇನ ಚಾಮ್ಬಿಕೇ ।
ಘಂಟಾಸ್ವನೇನ ನಃ ಪಾಹಿ ಚಾಪಜ್ಯಾನಿಃಸ್ವನೇನ ಚ ॥
19) ಸಮಸ್ತ ವಿದ್ಯೆಗಾಗಿ ಮತ್ತು ಸಮಸ್ತ ಸ್ತ್ರಿಯರಲ್ಲಿ
ಮಾತೃಭಾವ ಪ್ರಾಪ್ತಿಗಾಗಿ
ವಿದ್ಯಾ ಸಮಸ್ತಾಸ್ತವ ದೇವಿ ಭೇದಾಃ
ಸ್ತ್ರಿಯಃ ಸಮಸ್ತಾಃ ಸಕಲಾ ಜಗತ್ಸು ।
ತ್ವೈಕಯಾ ಪೂರಿತಮಮ್ಬಯೈತತ್ ।
ಕಾ ತೇ ಸ್ತುತಿಃ ಸ್ತವ್ಯಪರಾ ಪರೋಕ್ತ್ತಿಃ ॥
20) ಎಲ್ಲರ ಕಲ್ಯಾಣಕ್ಕಾಗಿ
ಸರ್ವಮಂಗಲಮಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ ।
ಶರಣ್ಯೇ ತ್ರ್ಯಮ್ಬಕೇ ಗೌರಿ ನಾರಾಯಣಿ ನಮೋಽಸ್ತು ತೇ ॥
21) ಶಕ್ತಿಪ್ರಾಪ್ತಿಗಾಗಿ
ಸೃಷ್ಟಿಸ್ಥಿತಿವಿನಾಶಾನಾಂ ಶಕ್ತಿಭೂತೇ ಸನಾತನಿ ।
ಗುಣಾಶ್ರಯೇ ಗುಣಮಯೇ ನಾರಾಯಣಿ ನಮೋಽಸ್ತು ತೇ ॥
22) ಪ್ರಸನ್ನತಾಪ್ರಾಪ್ತಿಗಾಗಿ
ಪ್ರಣತಾನಾಂ ಪ್ರಸೀದ ತ್ವಂ ದೇವಿ ವಿಶ್ವಾರ್ತಿಹಾರಿಣಿ ।
ತ್ರೈಲೋಕ್ಯವಾಸಿನಾಮೀಡ್ಯೇ ಲೋಕಾನಾಂ ವರದಾ ಭವ ॥
23) ವಿವಿಧ ಉಪದ್ರವ ನಿವಾರಣೆಗಾಗಿ
ರಕ್ಷಾಂಸಿ ಯತ್ರೋಗ್ರವಿಷಾಶ್ಚ ನಾಗಾ
ಯತ್ರಾರಯೋ ದಸ್ಯುಬಲಾನಿ ಯತ್ರ ।
ದಾವಾನಲೋ ಯತ್ರ ತಥಾಬ್ಧಿಮಧ್ಯೇ
ತತ್ರ ಸ್ಥಿತಾ ತ್ವಂ ಪರಿಪಾಸಿ ವಿಶ್ವಮ್ ॥
24) ಬಾಧೆಯಿಂದ ಮುಕ್ತವಾಗಲು, ಧನ ಮತ್ತು ಪುತ್ರಾದಿ ಪ್ರಾಪ್ತಿಗಾಗಿ
ಸರ್ವಬಾಧಾವಿನಿರ್ಮುಕ್ತೋ ಧನಧಾನ್ಯಸುತಾನ್ವಿತಃ ।
ಮನುಷ್ಯೋ ಮತ್ಪ್ರಸಾದೇನ ಭವಿಷ್ಯತಿ ನ ಸಂಶಯಃ ॥
25) ಭುಕ್ತಿಮುಕ್ತಿ ಪ್ರಾಪ್ತಿಗಾಗಿ
ವಿಧೇಹಿ ದೇವಿ ಕಲ್ಯಾಣಂ ವಿಧೇಹಿ ಪರಮಾಂ ಶ್ರಿಯಮ್ ।
ರುಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ ॥
26) ಪಾಪನಾಶ ತಥಾ ಭಕ್ತಿಪ್ರಾಪ್ತಿಗಾಗಿ
ನತೇಭ್ಯಃ ಸರ್ವದಾ ಭಕ್ತ್ಯಾ ಚಂಡಿಕೇ ದುರಿತಾಪಹೇ ।
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ ॥
27) ಸ್ವರ್ಗ ಮತ್ತು ಮೋಕ್ಷಕ್ಕಾಗಿ
ಸರ್ವಭೂತಾ ಯದಾ ದೇವೀ ಸ್ವರ್ಗಮುಕ್ತಿಪ್ರದಾಯಿನೀ ।
ತ್ವಂ ಸ್ತುತಾ ಸ್ತುತಯೇ ಕಾ ವಾ ಭವನ್ತು ಪರಮೋತ್ತಯಃ ॥
28) ಸ್ವರ್ಗ ಮತ್ತು ಮುಕ್ತಿಗಾಗಿ
ಸರ್ವಸ್ಯ ಬುದ್ಧಿರೂಪೇಣ ಜನಸ್ಯ ಹೃದಿ
ಸಂಸ್ಥಿತೇ ।
ಸ್ವರ್ಗಾಪವರ್ಗದೇ ದೇವಿ ನಾರಾಯಣಿ ನಮೋಽಸ್ತು ತೇ ॥
29) ಮೋಕ್ಷ ಪ್ರಾಪ್ತಿ
ತ್ವಂ ವೈಷ್ಣವೀ ಶಕ್ತಿರನನ್ತವೀರ್ಯಾ
ವಿಶ್ವಸ್ಯ ಬೀಜಂ ಪರಮಾಸಿ ಮಾಯಾ ।
ಸಮ್ಮೋಹಿತಂ ದೇವಿ ಸಮಸ್ತಮೇತತ್
ತ್ವಂ ವೈ ಪ್ರಸನ್ನಾ ಭುವಿ ಮುಕ್ತಿಹೇತುಃ ॥
30) ಸ್ವಪ್ನದಲ್ಲಿ ಸಿದ್ಧಿ-ಅಸಿದ್ಧಿ ತಿಳಿದುಕೊಳ್ಳಲು
ದುರ್ಗೇ ದೇವಿ ನಮಸ್ತುಭ್ಯಂ ಸರ್ವಕಾಮಾರ್ಥಸಾಧಿಕೇ ।
ಮಮ ಸಿದ್ಧಿಮಸಿದ್ಧಿಂ ವಾ ಸ್ವಪ್ನೇ ಸರ್ವಂ ಪ್ರದರ್ಶಯ ॥
ಅತ್ಯಂತ ಭಕ್ತಿಶ್ರದ್ಧೆಯಿಂದ ಸಂಗ್ರಹಿಸಿದ್ದು ಈ ಮಂತ್ರಗಳನ್ನು ಹೋಮ ಹವನ ದೇವಿ ಆರಾಧನೆ ಭಕ್ತರ ಕಷ್ಟ ನಷ್ಟಗಳಿಗೆ ಉಪಯೊಗಿಸಿಕೊಳ್ಳಿ ಸಾಧನೆಗೆ ಅತ್ಯುತ್ತಮ ಸಿದ್ಧಿ ಮಂತ್ರಗಳು.
ಮನಸ್ಸಿನ ಶಾಂತಿಗಾಗಿ ಅತ್ಯಂತ ಶಕ್ತಿಯುತ ಮಂತ್ರ
tvamev maata ch pita tvamev
tvamev bandhushch sakha tvamev
tvamev vidya dravinam tvamev
tvamev sarvam mam dev dev .
त्वमेव माता च पिता त्वमेव ।
त्वमेव बन्धुश्च सखा त्वमेव ।
त्वमेव विद्या द्रविणम् त्वमेव।
त्वमेव सर्वम् मम देव देव ॥
